DAKSHINA KANNADA
ಮಂಗಳೂರು – ಜಿಲ್ಲೆಯ ಗಡಿ ಭಾಗಗಳ ಚೆಕ್ ಪೋಸ್ಟ್ ನಲ್ಲಿ ತೀವ್ರ ತಪಾಸಣೆ
ಸುಳ್ಯ ಮಾರ್ಚ್ 30 : ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಗಡಿಗಳ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಪಾಸಣೆಯನ್ನು ಬಿಗಿಗೊಳಿಸಿದ್ದು, ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಕಣ್ಣಿಟ್ಟಿದ್ದಾರೆ.
ಸುಳ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಕಲ್ಲುಗುಂಡಿ ಜಿಲ್ಲಾ ಗಡಿ ಪೊಲೀಸ್ ಚೆಕ್ಪೋಸ್ಟ್, ಸಂಪಾಜೆ ಅರಣ್ಯ ಚೆಕ್ಪೋಸ್ಟ್, ಜಾಲ್ಸೂರು ಪೊಲೀಸ್ ಚೆಕ್ ಪೋಸ್ಟ್, ಆಲೆಟ್ಟಿ ಸಮೀಪದ ನಾರ್ಕೋಡು ರಾಜ್ಯ ಗಡಿ ಪೊಲೀಸ್ ಚೆಕ್ಪೋಸ್ಟ್, ಮಂಡೆಕೋಲು ಪೊಲೀಸ್ ಚೆಕ್ ಪೋಸ್ಟ್, ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಗಡಿ ಚೆಕ್ ಪೋಸ್ಟ್ ಗಳು ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಮುಖ ಚೆಕ್ ಪೋಸ್ಟ್ ಗಳಾಗಿದ್ದು, ಇಲ್ಲೆಲ್ಲ ಬಾರೀ ಕಟ್ಟೆಚ್ಚರ ವಹಿಸಲಾಗಿದೆ.
ನೀತಿ ಸಂಹಿತೆ ಜಾರಿಯಾಗುತ್ತಲೇ ಚೆಕ್ ಪೋಸ್ಟ್ ಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಕಣ್ಣಿಟ್ಟಿರು ಪೊಲೀಸರು ಎಲ್ಲಾ ರೀತಿಯಲ್ಲೂ ತಪಾಸಣೆ ಮಾಡುತ್ತಿದ್ದು, ಯಾವುದೇ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಹಗಲು ಹಾಗೂ ರಾತ್ರಿಯಲ್ಲೂ ನಿರಂತರ ತಪಾಸಣಾ ವ್ಯವಸ್ಥೆ ಮುಂದುವರಿದಿದೆ. ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಕೆಮರಾ ಗಳ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ.
You must be logged in to post a comment Login