Connect with us

FILM

ನ್ಯಾಯಾಲಯದ ಜೊತೆ ನಾಟಕವಾಡಬೇಡಿ – ಬಾಬಿ ಚೆಮ್ಮನೂರುಗೆ ಕೇರಳ ಹೈಕೋರ್ಟ್ ವಾರ್ನಿಂಗ್

ಕೊಚ್ಚಿ ಜನವರಿ 15: ಮಲಯಾಳಂ ನಟಿ ಹನಿ ರೋಸ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿ ಜೈಲು ಪಾಲಾಗಿದ್ದ ಉದ್ಯಮಿ ಬಾಬಿ ಚೆಮ್ಮನೂರು ಅವರನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬಾಬಿ ಚೆಮ್ಮನೂರು ವರ್ತನೆಯಿಂದ ಕೋಪಗೊಂಡ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್, ಹೈಕೋರ್ಟ್ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು. ನೀಡಿದ ಜಾಮೀನನ್ನು ರದ್ದುಗೊಳಿಸಲುಬಹುದು ಎಂದು ಎಚ್ಚರಿಸಿದೆ


ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಉದ್ಯಮಿ ಬಾಬಿ ಚೆಮ್ಮನೂರು ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು, ಆದರೆ ಬಾಬಿ ತಾನು ಜೈಲಿನಿಂದ ಹೊರಗೆ ಬರುವುದಿಲ್ಲ ಎಂದು ಹೇಳಿದ್ದರು. ಇದು ಕೋರ್ಟ್ ಗಮನಕ್ಕೆ ಬಂದ ಹಿನ್ನಲೆ ಜಾಮೀನು ಪಡೆದ ನಂತರವೂ ಏಕೆ ಹೊರಬರಲಿಲ್ಲ ಎಂಬುದಕ್ಕೆ ಮಧ್ಯಾಹ್ನ 12 ಗಂಟೆಯೊಳಗೆ ವಿವರಣೆ ನೀಡುವಂತೆ ಹೈಕೋರ್ಟ್ ಚೆಮ್ಮನೂರು ಅವರನ್ನು ಕೇಳಿದೆ.

ನಿನ್ನೆ ಮಂಗಳವಾರ ಸಂಜೆ 4.08 ರೊಳಗೆ ಜಾಮೀನು ಆದೇಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಸಂಜೆ 4.45 ರೊಳಗೆ ಬಿಡುಗಡೆ ಆದೇಶವನ್ನು ಹೊರಡಿಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು. ಅದರ ನಂತರ ಅವರನ್ನು ಜೈಲಿನಲ್ಲಿ ಏಕೆ ಉಳಿಸಿಕೊಳ್ಳಲಾಯಿತು ಎಂದು ಅದು ಕೇಳಿದೆ. ಜೈಲಿನಲ್ಲಿ ಹಲವಾರು ರಿಮಾಂಡ್ ಕೈದಿಗಳಿರುವುದರಿಂದ ಅವರು ಜಾಮೀನು ಪಡೆದಿದ್ದರೂ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಉದ್ಯಮಿ ಹೇಳಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಬಾಂಡ್ ಕಾರ್ಯಗತಗೊಳಿಸಲು ಅವರ ಬಳಿ ಹಣವಿಲ್ಲದ ಕಾರಣ ಜಾಮೀನು ಸಿಕ್ಕಿದ್ದರೂ ಹೊರಗೆ ಬರಲು ಸಾಧ್ಯವಾಗಲಿಲ್ಲ.

ಇದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುನ್ಹಿಕೃಷ್ಣನ್ , ನೀವು ರಿಮಾಂಡ್ ಕೈದಿಗಳ ವಕಾಲತ್ತು ತೆಗೆದುಕೊಳ್ಳಬೇಕಾಗಿಲ್ಲ. ಅವರನ್ನು ನೋಡಿಕೊಳ್ಳಲು ಹೈಕೋರ್ಟ್ ಮತ್ತು ನ್ಯಾಯಾಂಗವಿದೆ. ನ್ಯಾಯಾಲಯದೊಂದಿಗೆ ನಾಟಕವಾಡಬೇಡಿ. ಅವರು ಮಾಧ್ಯಮಗಳ ಗಮನ ಸೆಳೆಯಲು ಬಯಸುತ್ತಾರೆ, ಬಿಡುಗಡೆ ಆದೇಶವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ. ಅವರ ಜಾಮೀನನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿದರು.

ನೀವು ಕಾನೂನಿಗೆ ಮೀರಿದವರು ಎಂದು ಭಾವಿಸುತ್ತೀರಾ? ಅವರನ್ನು ಬಂಧಿಸಿ ಎರಡು ವಾರಗಳಲ್ಲಿ ತನಿಖೆ ಪೂರ್ಣಗೊಳಿಸಲು ಆದೇಶಿಸುವಂತೆ ನಾನು ಪೊಲೀಸರನ್ನು ಕೇಳಬಹುದು ಎಂದರು.
ಬಳಿಕ ಬಾಬಿ ಚೆಮ್ಮನೂರು ಅವರ ಪರ ವಕೀಲು ಕೋರ್ಟ್ ಗೆ ಕ್ಷಮಾಪಣೆ ಅರ್ಜಿಯನ್ನು ಸಲ್ಲಿಸಿದರು. ಕೋರ್ಟ್ ಅದನ್ನು ಸ್ವೀಕರಿಸಿತು.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *