Connect with us

LATEST NEWS

ಉಡುಪಿ: ಮೇಲ್ ಸೇತುವೆಯಿಂದ ಬೈಕ್ ಮೇಲೆ ಬಿದ್ದ ಕಾರು ಬೈಕ್ ಸವಾರ ಮೃತ್ಯು

ಉಡುಪಿ, ಜುಲೈ 11 : ಉಡುಪಿ ಕರಾವಳಿ ಬೈಪಾಸ್ ಮೇಲ್ ಸೇತುವೆಯಲ್ಲಿ ಕಾರೊಂದು ಮೇಲಿನಿಂದ ಕೆಳಗೆ ಕೆಳಗೆ ರಸ್ತೆಯಲ್ಲಿ ಸಂಚರಿಸಸುತ್ತಿದ್ದ ಬೈಕ್ ನ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.

ಸಾವನ್ನಪ್ಪಿದ ಯುವಕ ಬಾಗಲಕೋಟೆಯ ಮೂಲದ ಸುನೀಲ್ ಕುಮಾರ್ (24) ಎಂದು ತಿಳಿದು ಬಂದಿದೆ. ಕಾರು ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದು  ತಾಯಿ‌ ಮತ್ತು ಮಗ ಇದ್ದರು ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಕಾರು ಮೇಲ್ ಸೇತುವೆಯಲ್ಲಿ ಮಂಗಳೂರಿನತ್ತ ಪ್ರಯಾಣಿಸುತಿತ್ತು‌. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆಳಗೆ ರಸ್ತೆಗೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ಕಾರು ಕೆಳ ರಸ್ತೆಯಲ್ಲಿ ಬೈಕ್ ಸವಾರನ ಮೈಮೇಲೆ ಬಿದ್ದು,ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಮಹಿಳೆ ಮತ್ತು ಅವರ ಮಗನಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಉಡುಪಿಯ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿದ್ದಾರೆ. ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Share Information
Continue Reading
Advertisement
Click to comment

Leave a Reply

Your email address will not be published. Required fields are marked *