FILM
ಬರೀ ಗಲಾಟೆಗಳ ಸೀಸನ್ ಆದ ಬಿಗ್ ಬಾಸ್ – ಹೊಡೆದಾಡಿಕೊಂಡ ಇಬ್ಬರಿಗೆ ಗೇಟ್ ಪಾಸ್ ಕೊಟ್ಟ ಬಿಗ್ ಬಾಸ್
ಬೆಂಗಳೂರು ಅಕ್ಟೋಬರ್18: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಈ ಬಾರಿ ಗಲಾಟೆಗಳ ಶೋ ಆಗಿ ಬದಲಾಗಿದೆ. ಪ್ರಾರಂಭದಿಂದಲೂ ಬರೀ ಗಲಾಟೆಗಳೇ ನಡೆಯುತ್ತಿದ್ದು, ಇದೀಗ ಅತಿರೇಕಕ್ಕೆ ಹೋಗಿ ಮೂರನೇ ವಾರದೊಳಗೆ ಇಬ್ಬರು ಮನೆಯಿಂದ ಹೊರಕ್ಕೆ ಹೋಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮನೊರಂಜನೆ ಅನ್ನೊದು ಮರೆತು ಹೋಗಿ ಇದೀಗ ಬರೀ ಗಲಾಟೆಗಳ ಶೋ ಆಗಿ ಬದಲಾಗಿದೆ. ಎಪಿಸೋಡ್ನಲ್ಲಿ ಸ್ಪರ್ಧಿಗಳ ಬಾಯಿಂದ ಕೆಟ್ಟ ಶಬ್ದಗಳು ಸುಲಲಿತವಾಗಿ ಬಂದಿವೆ. ಬಿಗ್ ಬಾಸ್ ಕೂಗುತ್ತಿದ್ದರೂ ಎಲ್ಲರೂ ಮಿತಿ ಮೀರಿ ನಡೆದುಕೊಂಡಿದ್ದಾರೆ. ಇದರಿಂದ ಸ್ವತಃ ಬಿಗ್ ಬಾಸ್ ಟೆಂಪರ್ ಕಳೆದುಕೊಳ್ಳುವಂತೆ ಆಗಿದೆ. ಸದ್ಯ ಬಿಗ್ ಬಾಸ್ ವಾತಾವರಣ ಹದಗೆಟ್ಟಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರೋ ಸಾಧ್ಯತೆ ಇತ್ತು. ಹೀಗಾಗಿ, ಇಬ್ಬರನ್ನು ಬಿಗ್ ಬಾಸ್ ಹೊರಕ್ಕೆ ಕಳುಹಿಸಿದ್ದಾರೆ.
ಬಿಗ್ ಬಾಸ್’ನಲ್ಲಿ ಜಗದೀಶ್ ಹಾಗೂ ಉಳಿದ ಸ್ಪರ್ಧಿಗಳ ಮಧ್ಯೆ ಕಿರಿಕ್ ಆಗಿದೆ. ಇದಕ್ಕೆ ಕಾರಣ ಆಗಿದ್ದು ಜಗದೀಶ್ ಅವರು. ಹಂಸಾ ವಿರುದ್ಧ ಅವರು ಬಳಕೆ ಮಾಡಿದ ಶಬ್ದ ಎಲ್ಲರ ಕೋಪಕ್ಕೆ ಕಾರಣ ಆಗಿದೆ. ಇದು ಇಡೀ ಮನೆ ಹೊತ್ತು ಉರಿಯಲು ಕಾರಣವಾಯಿತು. ಜಗದೀಶ್ ಅವರು ಬಳಸಿದ ಅವಾಚ್ಯ ಶಬ್ದದಿಂದ ಎಲ್ಲರೂ ಅವರ ವಿರುದ್ಧ ಸಿಡಿದೆದ್ದರು.
ಈ ಗಲಾಟೆ ವೇಳೆ ರಂಜಿತ್ ಜಗದೀಶ್ ಅವರನ್ನು ತಳ್ಳಿದ್ದಾರೆ. ಇಡೀ ಎಪಿಸೋಡ್ ತುಂಬಾ ಬೈಗುಳಗಳೇ ಇದ್ದಿದ್ದರಿಂದ ಬಿಗ್ ಬಾಸ್ಗೆ ಬೀಪ್ ಹಾಕಿ ಹಾಕಿ ಸಾಕಾಯಿತು. ವೀಕ್ಷಕರಿಗೆ ಇದು ಅಸಹ್ಯ ಹುಟ್ಟಿಸಿತು.
ಮಹಿಳೆಯರಿಗೆ ಅವಮಾನ ಮಾಡಿದ ಪ್ರಕರಣದಲ್ಲಿ ಜಗದೀಶ್ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಇನ್ನು, ರಂಜಿತ್ ಅವರು ಜಗದೀಶ್ನ ತಳ್ಳಿದ ಆರೋಪ ಹೊಂದಿದ್ದು, ಅವರು ಕೂಡ ಎಲಿಮಿನೇಟ್ ಆಗಿದ್ದಾರೆ.
ನ್ಯಾಯ ಎತ್ತಿ ಹಿಡಿಯೋಕೆ ನಡೆದಿದೆ ಡಬಲ್ ಎಲಿಮಿನೇಷನ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/lFcPAYAlos
— Colors Kannada (@ColorsKannada) October 18, 2024
You must be logged in to post a comment Login