Connect with us

    FILM

    ಬಿಗ್ ಬಾಸ್ ನಲ್ಲಿ ಧನರಾಜ್ ಆಚಾರ್ ಕಣ್ಣೀರು…ಕಾರಣ….?

    ಬೆಂಗಳೂರು ಅಕ್ಟೋಬರ್ 15: ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಎರಡು ವಾರ ಕಳೆದಿದೆ. ಈ ನಡುವೆ ಬಿಗ್ ಬಾಸ್ ನಲ್ಲಿ ನಾಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನವಾಗಿ ನಡೆಸಲಾಗುತ್ತಿದೆ. ಬಿಗ್ ಬಾಸ್ ನಲ್ಲಿರುವ ಮೂವರು ಕರಾವಳಿಯವರು ಇದ್ದು, ಧನರಾಜ್ ಮಾತ್ರ ಶೋ ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ ಅನ್ನೊದು ಜನರ ಮಾತು.


    ಅದೇ ರೀತಿ ಇದೀಗ ಧನರಾಜ್ ಕೂಡ ಮಾತನಾಡಿದ್ದು, ನಾನು ಈ ಶೋ ಗೆ ಅನ್ಫಿಟ್ ಅನ್ನೊ ರೀತಿ ಅನಿಸೋಕೆ ಶುರುವಾಗಿದೆ ಎಂದಿದ್ದಾರೆ. ಕಲರ್ಸ್ ಕನ್ನಡದ ಹೊಸ ಪ್ರೋಮೋದಲ್ಲಿ ಧನರಾಜ್ ಕಣ್ಣೀರಿಟಿದ್ದಾರೆ.
    ”ಅತಿಥಿಯೋ, ಆಟಗಾರನೋ? ಫುಲ್ ಕನ್‌ಫ್ಯೂಶನ್!” ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಎಂಬ ಕ್ಯಾಪ್ಷನ್​​ನೊಂದಿಗೆ ಬಿಗ್​ ಬಾಸ್​ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಪ್ರೋಮೋ ಅನಾವರಣಗೊಳಿಸಿದೆ.


    ಶಿಶಿರ್​​ ನಾಮಿನೇಷನ್ ಗೆ ಧನರಾಜ್​ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರಿನ್ನೂ ಕನ್​ಫ್ಯೂಶನ್​​​ನಲ್ಲಿದ್ದಾರೆ. ಈ ಮನೆಯಲ್ಲಿ ಆಟಗಾರನ ಅಥವಾ ಗೆಸ್ಟ್ ಆ ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ ಎಂದು ಶಿಶಿರ್​ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ. ಅದನ್ನು ವಿವರಿಸಬಹುದಾ? ಎಂದು ಧನರಾಜ್ ಕೇಳಿಕೊಂಡಿದ್ದಾರೆ.

    ನೀವೆಲ್ಲೋ ಕಳೆದು ಹೋಗಿದ್ದೀರಾ ಅನ್ನೋದು ನನ್ನ ಅಭಿಪ್ರಾಯ ಎಂದು ವಿವರಿಸಿದ್ದಾರೆ. ಅದಕ್ಕೆ ಮಚ್ಚಾ ಮಚ್ಚಾ ಬಚ್ಚಲ್​ ಮನೆ ಸ್ವಚ್ಛ ಎಂದು ಹೇಳುತ್ತಲೇ ಧನರಾಜ್​ ಕಹಿ ಜ್ಯೂಸ್​ ಅನ್ನು ಕುಡಿದಿದ್ದಾರೆ. ನಂತರ ಈ ಬಗ್ಗೆ ಚಿಂತಿಸತೊಡಗಿದ ಧನರಾಜ್ ಅವರು, ಆಕಡೆ ಮಾತನಾಡುತ್ತೀನಿ, ಈಕಡೆ ಮಾತನಾಡೋದೂ ಇಲ್ಲ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ನಾನೇ ಅನ್​ಫಿಟ್​ ಅನ್ಸೋಕೆ ಶುರುವಾಗೋಗಿದೆ ನನ್ ಮನ್ಸಲ್ಲೇ ಎಂದು ಕೊರಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply