Connect with us

FILM

ಸ್ವತಃ ಗದ್ದೆಗಿಳಿದು ನಾಟಿ ಮಾಡಿದ ಕನ್ನಡ ಬಿಗ್ ಬಾಸ್ ಸ್ಪರ್ಧಿ ರಾಯಲ್ ಶೆಟ್ಟಿ

ಉಡುಪಿ: ಬಿಗ್ ಬಾಸ್ ಕನ್ನಡ ಸೀಸನ್ 7 ರಾಯಲ್ ಶೆಟ್ಟಿ ಖ್ಯಾತಿ ಭೂಮಿ ಶೆಟ್ಟಿ ಲೌಕ್ ಡೌನ್ ಸಂದರ್ಭ ತಮ್ಮ ಊರಿನ ಮನೆಯಲ್ಲಿ ಈಗ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.  ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಗಂಟಿಹೊಳೆಯ ಭಾಸ್ಕರ್ ಶೆಟ್ಟಿ ಹಾಗೂ ಬೇಬಿ ಶೆಟ್ಟಿ ದಂಪತಿಯ ಮಗಳು ಭೂಮಿ ಶೆಟ್ಟಿ ಈಗ ಮನೆಯವರ ಕೃಷಿ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಈ ಮೂಲಕ ಇವರು ಯುವ ಜನತೆಗೆ ಮಾದರಿಯಾಗಿದ್ದಾರೆ.


ಹಡಿಲು ಬಿಡಬೇಕಾದ ಗದ್ದೆಗಳಿಗೆ ಗೊಬ್ಬರ ಹಾಕಿ ಭೂಮಿ ಶೆಟ್ಟಿ, ಮುಂದೆ ನಿಂತು ನಾಟಿ ಕಾರ್ಯ ಮಾಡುತ್ತಿದ್ದಾರೆ. ಈ ಹಿಂದೆ ಅಜ್ಜ ಬೇಸಾಯ ಮಾಡುತ್ತಿದ್ದ ಗದ್ದೆಗೆ ತಾವೇ ತಲೆಮೇಲೆ ಗೊಬ್ಬರ ಹೊತ್ತಿಕೊಂಡು ಹೋಗಿ ಹಾಕಿದ್ದಾರೆ. ಈ ವರ್ಷ ಗದ್ದೆ ನಾಟಿ ಮಾಡುವುದು ಬೇಡ ಎಂದು ಭೂಮಿ ಮನೆಯವರು ಅಂದುಕೊಂಡಿದ್ದರಂತೆ. ಮನೆಯಲ್ಲಿಯೇ ಇರೋದರಿಂದ ನಾನು ಸಾಥ್ ನೀಡುತ್ತೇನೆ ಎಂದು ಭೂಮಿ ಶೆಟ್ಟಿ ಅವರು ಗದ್ದೆ ಕೆಲಸ ಮಾಡ್ತೀನಿ ಅಂತ ಭೂಮಿ ಮನೆಯವರಿಗೆ ಆಶ್ವಾಸನೆ ಕೊಟ್ಟು ಕೆಲಸ ಆರಂಭಿಸಿದ್ದಾರೆ.


ಬೆಳಗ್ಗೆಯಿಂದ ಸಂಜೆಯವರೆಗೂ ಭೂಮಿ ಶೆಟ್ಟಿ ಗದ್ದೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಗದ್ದೆ ನಾಟಿ ಮಾಡುವ ವಿಡಿಯೋವನ್ನು ಭೂಮಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕೃಷಿಕರ ಜೀವನ ಅಂದರೆ ತಾಳ್ಮೆಯಿಂದಿರಬೇಕು. ಇದೊಂದು ಕಲಿಕೆ. ಬೆಳೆ ಫಸಲು ಕೊಡಲು, ದನ ಹಾಲು ಕೊಡಲು ನಾವು ಅವಸರ ಮಾಡಲಾಗೋದಿಲ್ಲ. ಕೃಷಿ ನಿಜವಾಗಲೂ ಇದು ಬುದ್ಧಿವಂತಿಕೆಯಿಂದ ಮಾಡಬೇಕಾದ ಕೆಲಸ. ಇದರಿಂದ ತುಂಬ ಖುಷಿಯಾಗುತ್ತದೆ’ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *