Connect with us

KARNATAKA

ಬೆಂಗಳೂರು : ತೀಯ ಸಮಾಜದಿಂದ ‘ಆಟಿಕೂಟ’,

ಬೆಂಗಳೂರು : ತೀಯ ಸಮಾಜ ಬೆಂಗಳೂರು (ರಿ) ಇದರ 2024 ನೇ ಆಟಿಕೂಟ ಆಗಸ್ಟ್ 11ರಂದು ಶ್ರೀ ಸುಂದರ್ ಮಹಲ್ ನಲ್ಲಿ ನಡೆಯಿತು.

ಸಂಘದ ಮಹಿಳಾ ವಿಭಾಗದವರು ಆಯೋಜಿಸಿದ ಈ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ  ಸುಕುಮಾರ್, ಪ್ರಧಾನ ಕಾರ್ಯದರ್ಶಿ  ಸದಾನಂದ, ಖಜಾಂಚಿ  ಹರೀಶ್ ಅವರು ಸಂದರ್ಬೋಚಿತವಾಗಿ ಮಾತನಾಡಿದರು. ಅತಿಥಿಗಳಾಗಿ  ವಿಜಯಕುಮಾರ್,  ಜಯರಾಜ್ ಬಂಗೇರ, ಶ್ರೀಮತಿ ಶಾಂಭವಿ ಕೃಷ್ಣ ಹಾಗೂ ಶ್ರೀಮತಿ ಭಾರತಿ ರವೀಂದ್ರ ಅವರು ಹಾಜರಿದ್ದರು. ಸಂಘದ ಯುವ ವೇದಿಕೆಯ ಪರವಾಗಿ  ಶಿವಪ್ರಸಾದ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಶ್ರೀಮತಿ ನಳಿನಿ ದಾಸ್ ಇವರ ಶ್ಲಾಘನೀಯ ಕೊಡುಗೆ ಹಾಗೂ ಅವರ ಸಮಾಜ ಸೇವೆ ಯನ್ನು ಗುರುತಿಸಿ ಗೌರವಿಸಲಾಯಿತು. ಮಹಿಳಾ ಸಮಾಜದ ಪರವಾಗಿ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಶರತ್ ಹಾಗೂ ಕಾರ್ಯದರ್ಶಿ ಡಾ.ಪ್ರಕೃತಿ ಶ್ರೀನಾಥ್, ಖಜಾಂಚಿ ಜ್ಯೋತ್ಸ್ನಾ ಜನಾರ್ಧನ್ ಅವರು ಮಾತನಾಡಿದರು. ನಂತರ ಮಹಿಳಾ ಸಂಘದ ಸದಸ್ಯರ ತಮ್ಮ ಮನೆಯಲ್ಲಿ ತಯಾರಿಸಿದಂತಹ ಸುಮಾರು 28 ಬಗೆಯ ಮಂಗಳೂರು ಶೈಲಿಯ ವಿವಿಧ ಖಾದ್ಯಗಳನ್ನು ಸೇವಿಸಿ ಆಟಿಕೂಟ ಆಚರಿಸಿದರು. ಈ ಸಭೆಯಲ್ಲಿ ಸುಮಾರು 170 ಸದಸ್ಯರು ಭಾಗವಹಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *