Connect with us

    KARNATAKA

    ಬೆಂಗಳೂರು: ಬ್ಯುಸಿನೆಸ್ ವಿಚಾರ ಮಾತನಾಡಲು ಬಂದ ಯುವತಿಯ ಮೇಲೆ ಅತ್ಯಾಚಾರ

    ಬೆಂಗಳೂರು, ಆಗಸ್ಟ್ 12: ಬ್ಯುಸಿನೆಸ್ ವಿಚಾರವಾಗಿ ಮಾತನಾಡೋದಿದೆ ಎಂಬುದಾಗಿ ಯುವತಿಯನ್ನು ಕರೆಸಿಕೊಂಡ ಉದ್ಯಮಿಯೊಬ್ಬರು, ಆಕೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬಂದಿದೆ.

    ತಮಿಳುನಾಡಿನಿಂದ ಬೆಂಗಳೂರಿಗೆ ತಮ್ಮ ವ್ಯವಹಾರ ಸಂಬಂಧ ಆಗಮಿಸಿದ್ದಂತ ಉದ್ಯಮಿ ರಮೇಶ್ ಎಂಬಾತ, ಆಗಸ್ಟ್ 6ರಂದು ಯುವತಿಯೊಬ್ಬಳನ್ನು ಕರೆಸಿಕೊಂಡಿದ್ದನು. ಮೊದಲು ಕಬ್ಬನ್ ಪಾರ್ಕ್ ನಲ್ಲಿ ಬ್ಯುಸಿನೆಸ್ ಬಗ್ಗೆ ಮಾತನಾಡಿ, ಆ ಬಳಿಕ ಊಟಕ್ಕೆಂದು ಹೋಟೆಲ್ ಗೆ ಯುವತಿಯನ್ನು ಕರೆದೊಯ್ದಿದ್ದಾರೆ.

    ಹೋಟೆಲ್ ನಲ್ಲಿ ಊಟವಾದ ಬಳಿಕ ಕೆಲ ಹೊತ್ತು ಮಾತನಾಡಿರುವ ಉದ್ಯಮಿ ರಮೇಶ್, ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆಗಸ್ಟ್ 6ರಂದು ನಡೆದಿರೋ ಘಟನೆ ಸಂಬಂಧ ಮೂರು ದಿನಗಳ ಬಳಿಕ, ಯುವತಿಯು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರಿಗೆ ಅತ್ಯಾಚಾರ ಸಂಬಂಧ ದೂರು ನೀಡಿದ್ದಾರೆ.

    ಈ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅತ್ಯಾಚಾರಕ್ಕೆ ಒಳಗಾದಂತ ಯುವತಿ ಉದ್ಯಮಿ ರಮೇಶ್ ಅವರ ಸಂಬಂಧಿ ಎಂಬುದಾಗಿ ತಿಳಿದು ಬಂದಿದೆ. ಇದೀಗ ಯುವತಿಯ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡಿರುವಂತ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply