BELTHANGADI
ಬೆಳ್ತಂಗಡಿ: ಹಣ ಹಂಚುತ್ತಿದ್ದ ಶಾಸಕನ ಕಡೆಯವರನ್ನು ವಶಕ್ಕೆ ಪಡೆದ ಪೊಲೀಸರು!
ಬೆಳ್ತಂಗಡಿ, ಮೇ 10: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೆಲ್ಲಗುತ್ತು ಬಳಿ ಮತದಾರರಿಗೆ ಹಣ ಹಂಚುತ್ತಿದ್ದ ಶಾಸಕರ ಕಡೆಯವರನ್ನು ಪೋಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೆಲ್ಲಗುತ್ತು ಬಳಿ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹಣ ಹಂಚಿಕೆ ಮಾಡುತ್ತಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಾರು ತಡೆಗಟ್ಟಿ ವಿಚಾರಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ಶಾಸಕ, ಬಿಜೆಪಿ ಅಭ್ಯಾರ್ಥಿ ಹರೀಶ್ ಪೂಂಜ ಕಡೆಯವರಾದ ನಗರ ಪಂಚಾಯತ್ ಉಪಾಧ್ಯಕ್ಷ, ನಗರ ಪಂಚಾಯತ್ ಸದಸ್ಯ, ನಗರ ಪಂಚಾಯತ್ ಚಾಲಕ ಕಾರಿನಲ್ಲಿ ಇದ್ದು, ಚುನಾವಣಾಧಿಕಾರಿಗಳ ಸ್ಥಳಕ್ಕೆ ಆಗಮಿಸಿಹಣವನ್ನು ಸ್ಥಳದಲ್ಲೇ ಏಣಿಸಿ 61 ಸಾವಿರ ನಗದು ಸೀಜ್ ಮಾಡಿದ್ದಾರೆ, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
You must be logged in to post a comment Login