Connect with us

    BELTHANGADI

    ತಿಥಿ ದಿನ ಪ್ರತ್ಯಕ್ಷನಾದ ಮೃತ ವ್ಯಕ್ತಿ…ಸತ್ಯವಾದ ಜ್ಯೋತಿಷಿಯ ಮಾತು….!!

    ಬೆಳ್ತಂಗಡಿ: ಮೃತಪಟ್ಟಿದ್ದಾರೆಂದು ತಿಳಿದು ಅವರ ತಿಥಿ ಮಾಡುವ ಸಂದರ್ಭ ಆ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ ನಡೆದಿದೆ.


    ಮೃತರಾಗಿದ್ದಾರೆಂದು ತಿಳಿದ ಶ್ರೀನಿವಾಸ್‌ ಅಲಿಯಾಸ್‌ ಶೀನ ಮೊಯ್ಲಿ ಎಂಬವರು ಜನವರಿ 26 ರಂದು ನಾಪತ್ತೆಯಾಗಿದ್ದರು. ಸತತ ಹುಡುಕಾಟದ ಶೀನ ಮೊಯ್ಲಿ ಅವರು ಪತ್ತೆಯಾಗಿರಲಿಲ್ಲ. ಈ ನಡುವೆ ಫೆಬ್ರವರಿ 3 ರಂದು ಓಡಿಲ್ನಾಳ ಗ್ರಾಮದ ಕಲ್ಲುಂಜಕೆರೆಯಲ್ಲಿ ಅನಾಥ ಶವ ಪತ್ತೆಯಾಗಿತ್ತು. ಪತ್ತೆಯಾದ ಶವ ಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದುದ್ದರಿಂದ ಶವತ ಗುರುತು ಸಿಕ್ಕಿರಲಿಲ್ಲ. ಈ ಹಿನ್ನಲೆ ನಾಪತ್ತೆಯಾಗಿರುವ ಶ್ರೀನಿವಾಸ ಅವರದ್ದೇ ಶವ ಇರಬಹುದೆಂದು ಮನೆಯವರು ಅಂತ್ಯ ಸಂಸ್ಕಾರ ಕೂಡ ನೆರವೇರಿಸಿದ್ದರು.

    ಇತ್ತ ಶ್ರೀನಿವಾಸ ಅವರು ನಾಪತ್ತೆಯಾದ ಬಳಿಕ ಈ ಬಗ್ಗೆ ವಿಚಾರಿಸಲು ಕುಟುಂಬಸ್ಥರು ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿದ್ದರು. ಈ ವೇಳೆ ಶ್ರೀನಿವಾಸ ಅವರು ಸತ್ತಿಲ್ಲ. ಬಂದೇ ಬರುತ್ತಾನೆ ಎಂದು ಹೇಳಿದ್ದರು. ಆದರೆ ಜ್ಯೋತಿಷಿ ಹೇಳಿ ಸುಮಾರು ದಿನ ಕಳೆದರೂ ವ್ಯಕ್ತಿ ಬರದೇ ಇದ್ದಾಗ, ಕುಟುಂಬಸ್ಥರು ಆತನ ವೈಕುಂಠ ಸಮಾರಾಧನೆ ಏರ್ಪಡಿಸಿದ್ದರು. ಇದೇ ವೇಳೆ ವ್ಯಕ್ತಿ ಪ್ರತ್ಯಕ್ಷವಾಗಿ ಅಚ್ಚರಿ ಹುಟ್ಟಿಸಿದ್ದಾನೆ. ಅಲ್ಲಿಗೆ ಜ್ಯೋತಿಷಿಯ ಮಾತು ನಿಜವಾಗಿದೆ. ಈಗ ಮನೆಯವರು ಅಂತ್ಯಸಂಸ್ಕಾರ ಮಾಡಿರುವ ಮೃತ ದೇಹ ಯಾರದ್ದು ಎನ್ನುವ ಪ್ರಶ್ನೆ ಉದ್ಬವವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply