BELTHANGADI
ಬೆಳ್ತಂಗಡಿ – ಟೇಬಲ್ ಪ್ಯಾನ್ ಕೆಳಗೆ ಬೆಚ್ಚಗೆ ಮಲಗಿದ ಕಾಳಿಂಗ ಸರ್ಪ
ಬೆಳ್ತಂಗಡಿ ಜನವರಿ 06: ಕಾಳಿಂಗ ಸರ್ಪವೊಂದು ಮನೆಯ ಟೇಬಲ್ ಪ್ಯಾನ್ ಕಳೆಗೆ ಹಾಯಾಗಿ ಮಲಗಿರುವ ಘಟನೆ ಬೆಳ್ತಂಗಡಿಯ ಹತ್ಯಡ್ಕ ಎಂಬಲ್ಲಿ ನಡೆದಿದ್ದು, ಉರಗ ತಜ್ಞರೊಬ್ಬರು ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಇಲ್ಲಿನ ಹತ್ಯಡ್ಕ ನಿವಾಸಿಯಾಗಿರುವ ಉಮೇಶ್ ಎಂಬವರ ಮನೆಯ ರೂಂ ನ ಟೇಬಲ್ ಫ್ಯಾನ್ ಪಕ್ಕದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮಲಗಿರುವುದನ್ನು ಗಮನಿಸಿದ ಮನೆಯ ಸದಸ್ಯರು ಕ್ಷಣ ಕಾಲ ಗಾಬರಿಗೊಂಡು, ಸ್ಥಳೀಯ ಉರಗ ತಜ್ಞರಾದ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಉಮೇಶ್ ಮನೆಗೆ ಆಗಮಿಸಿದ ಸ್ನೇಕ್ ಅಶೋಕ್ ಲಾಯಿಲ ಅವರು ಕಾಳಿಂಗವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
You must be logged in to post a comment Login