Connect with us

    KARNATAKA

    ಮಳೆಗಾಲದ ತುಂಬಿ ಹರಿಯುವ ಕೊಳ,ಕೆರೆಗಳಲ್ಲಿ ಈಜುವಾಗ ಇರಲಿ ಜಾಗೃತೆ., ಎಡವಿದ್ರೆ ಜೀವಕ್ಕೆ ಅಪಾಯ..!

    ಬಾಗಲಕೋಟೆ :  ಅನೇಕ ಜನ ಮಳೆಗಾಲದಲ್ಲಿ  ತುಂಬಿ ಹರಿಯುವ  ಅಣೆಕಟ್ಟುಗಳು ಮತ್ತು ಕೊಳಗಳಿಗೆ ಹೋಗಿ ಈಜುವುದು, ಸ್ನಾನ ಮಾಡುವುದು ಸಹಜ. ಮಳೆಗಾಲದ ತುಂಬಿ ಹರಿಯುವ ಕೊಳ,ಕೆರೆಗಳಲ್ಲಿ ಈಜುವಾಗ, ಸ್ಥಾನ ಮಾಡುವಾಗ ಜಾಗೃತೆ ಅತೀ ಮುಖ್ಯವಾಗಿರಬೇಕಿದೆ. ಯಾಕೆಂದ್ರೆ ಈ ಸ್ಥಳಗಳು ದೊಡ್ಡ ದೊಡ್ಡ ಹಾವು, ವಿಷ ಜಂತುಗಳ ವಾಸ ಸ್ಥಾನವಾಗಿರುತ್ತೆ.

     

    ಇದು ಪ್ರಾಣಕ್ಕೂ ಸಂಚಕಾರ ತರುವ ಸಾಧ್ಯತೆಗಳಿವೆ.   ಇತ್ತೀಚೆಗೆ ಒಬ್ಬ ವ್ಯಕ್ತಿ ನದಿಯ ನೀರು ನೋಡಿ ಇಳಿದು ಅಲ್ಲಿ  ಖುಷಿಯಿಂದ ಈಜಲು ಶುರುಮಾಡಿದ್ದಾನೆ. ಈ ಮಧ್ಯೆ ತಾನು ಧರಿಸಿದ ಬಟ್ಟೆ ಒಳಗೆ ಏನೋ ಜಾರಿದಂತೆ ಅವನಿಗೆ ಅನಿಸಿತು. ಕೂಡಲೇ  ಆತ ನೀರಿನಿಂದ ಮೇಲೆ ಬಂದು ತನ್ನ ಬಟ್ಟೆಯನ್ನು ಮೇಲಕ್ಕೆತ್ತಿದಾಗ ಅದರೊಳಗೆ ದೊಡ್ಡ ಹಾವು ಸೇರಿಕೊಂಡಿರುವುದು ಕಂಡುಬಂದಿದೆ. ಈ ಸಂದರ್ಭ ಆತನ ಸ್ಥಿತಿ ಊಹಿಸಲು ಅಸಾಧ್ಯ. ಹೆದರಿದ ಆತ ಅದು ಎಲ್ಲಿ ತನಗೆ ಕಚ್ಚುತ್ತದೆ ಎಂದು ಭಯ ಭೀತನಾಗಿ ಕೊನೆಗೆ ಹಾವನ್ನು ಹಿಡಿದು ಹೊರಗೆ ಎಸೆದು ಓಟಕ್ಕಿತ್ತಿದ್ದಾನೆ. ಪ್ರಸ್ತುತ ಹಾವು ಕಚ್ಚದ ಕಾರಣ ಆತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಗುತ್ತಿದ್ದಾರೆ.  ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಗಳಿಗೆ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೊ ತಿಳಿಸಿರುವುದು ಮಾತ್ರ ಸತ್ಯವಾಗಿದೆ. .

    Share Information
    Advertisement
    Click to comment

    You must be logged in to post a comment Login

    Leave a Reply