Connect with us

    BANTWAL

    ಬಂಟ್ವಾಳ : ನಡುರಾತ್ರಿ ಸಿನಿಮೀಯ ಮಾದರಿ ತಲ್ವಾರ್ ವಾರ್, ಯುವಕರ ಗುಂಪಿನ ರಣಭೀಕರ ತಲವಾರು ಕಾಳಗ ದೃಶ್ಯ ಮೊಬೈಲ್ ನಲ್ಲಿ ಸೆರೆ..!

    ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ ನಡುರಾತ್ರಿ ಸಿನಿಮೀಯ ಮಾದರಿ ತಲ್ವಾರ್ ವಾರ್ ನಡೆದಿದ್ದು ಯುವಕರ ಗುಂಪಿನ ರಣಭೀಕರ ತಲವಾರು  ಕಾಳಗ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಬಂಟ್ವಾಳದ ಅಮ್ಮೆಮ್ಮಾರ್ ಎಂಬಲ್ಲಿ  ಪೂರ್ವದ್ವೇಷದ ಹಿನ್ನೆಲೆಯಲ್ಲಿ  ಯುವಕರ ಮೇಲೆ ರೌಡಿಶೀಟರ್ ಗಳಿಂದ ಯದ್ವಾತದ್ವಾ ತಲ್ವಾರ್ ದಾಳಿ ನಡೆದಿದ್ದುನಡುಬೀದಿಯಲ್ಲಿ ಯುವಕರನ್ನು ಅಟ್ಟಾಡಿಸಿ ತಲ್ವಾರಿನಲ್ಲಿ  ರೌಡಿ ಗ್ಯಾಂಗ್ ಕೊಚ್ಚಿ ಹಾಕಿತ್ತು. ತಲ್ವಾರ್ ದಾಳಿಯಲ್ಲಿ ಗಾಯಗೊಂಡ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬ ಇಬ್ಬರು ಯುವಕರು ಪ್ರಸ್ತುತ ಮಂಗಳೂರಿನ ಖಾಸಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದು ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ಈ  ಮಾರಕ ದಾಳಿ ನಡೆದಿದೆ. ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಆರೋಪಿಗಳೆಂದು ಗುರುತ್ತಿಸಲಾಗಿದೆ.

    ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಪೊಲೀಸರು ಪರಾರಿಯಾದ ಆರೋಪಿಗಳ  ಬೆನ್ನು ಬಿದ್ದಿದ್ದಾರೆ.  ತಸ್ಲೀಮ್ ಹಾಗೂ ಸ್ನೇಹಿತರು ಮಾತನಾಡುತ್ತಿದ್ದ ವೇಳೆ ತಸ್ಲೀಮ್ ಗೆ ಕರೆಯೊಂದು ಬಂದಿತ್ತು. ಈ ವೇಳೆ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಾಲ್ಕು ಮಾರ್ಗಕ್ಕೆ ಬರುವಂತೆ ಸವಾಲು ಹಾಕಿದ್ದ ಈ ಹಿನ್ನೆಲೆಯಲ್ಲಿ ಸವಾಲು ಸ್ವೀಕರಿಸಿದ್ದ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲಾ ಬಳಿಗೆ ಹೋದಾಗ ಆರೋಪಿ ಮನ್ಸೂರ್ ಹಾಗೂ ಇತರರು ತಲವಾರಿನಿಂದ ತಸ್ಲೀಮ್ ಮತ್ತು ಆತನ ಸ್ನೇಹಿತ ಮಹಮ್ಮದ್ ಶಕೀರ್ ಮೇಲೆ ದಾಳಿ ನಡೆಸಿ ಬಲಗಾಲು, ಬಲಗೈ, ಮುಖದ ಮೇಲೆ ಕಡಿದು ತಲವಾರಿನಿಂದ ಕಡಿದು ಬಳಿಕ ಪರಾರಿಯಾಗಿದ್ದರು.

     

    ಹಳೇ ದ್ವೇಷದಿಂದ ಕರೆಸಿ ಈ ತಲವಾರಿನಿಂದ ದಾಳಿ ನಡೆಸಿ ಶಂಕೆ ವ್ಯಕ್ತವಾಗಿದ್ದು ತಲವಾರು ಹಿಡಿದು‌  ನಡುರಾತ್ರಿ ರೌಡಿ ತಂಡ ನಡೆಸಿದ  ಅಟ್ಟಹಾಸ ಮೊಬೈಲ್‌ನಲ್ಲಿ ಸೆರೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply