BANTWAL
ಬಂಟ್ವಾಳ- ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ದನ ಚಂಡ್ತಿಮಾರ್ ನಿಧನ

ಬಂಟ್ವಾಳ ಜುಲೈ 21: ಕಾಂಗ್ರೇಸ್ ನ ಹಿರಿಯ ಮುಖಂಡ ಬಂಟ್ವಾಳ ಪುರಸಭಾ ಸದಸ್ಯ, ಜನಾರ್ದನ ಚಂಡ್ತಿಮಾರ್ (55) ಅನಾರೋಗ್ಯದಿಂದ ನಿಧನಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ದಲಿತ ಸಂಘಟನೆಗಳಲ್ಲೂ ಸಕ್ರೀಯರಾಗಿದ್ದಾರೆ.
ಪುರಸಭೆಯಲ್ಲಿ ತನ್ನ ಪ್ರಖರ ಮಾತುಗಳ ಮೂಲಕ ಅಧಿಕಾರಿಗಳ ಬಳಿ ಜನರ ಕೆಲಸವನ್ನು ಮಾಡಿಕೊಂಡುವಂತೆ ಎಚ್ಚರಿಸುತ್ತಿದ್ದರು. ಅವರ ನಿಧನಕ್ಕೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
