LATEST NEWS
ಸುಮಾರು 110 ಎಫ್ ಡಿ ಖಾತೆಯಲ್ಲಿದ್ದ 4.8ಕೋಟಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಖಾಲಿ ಮಾಡಿದ ಐಸಿಐಸಿಐ ಬ್ಯಾಂಕ್ ಮ್ಯಾನೆಜರ್

ಕೋಟಾ : ಈಕೆಗೆ ಕೇವಲ 26 ವರ್ಷ ಐಸಿಐಸಿಐ ಬ್ಯಾಂಕ್ ರಾಜಸ್ಥಾನದ ಕೋಟಾ ದಲ್ಲಿ ಬ್ರ್ಯಾಂಚ್ ಒಂದರಲ್ಲಿ ರಿಲೆಶನ್ ಶಿಪ್ ಮ್ಯಾನೆಜರ್ ಆಗಿರುವ ಈಕೆ ಬ್ಯಾಂಕ್ ನಲ್ಲಿದ್ದ 110 ಎಫ್ ಡಿ ಖಾತೆಯಲ್ಲಿದ್ದ 4.8 ಕೋಟಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಉಡಾಯಿಸಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಎರಡು ವರ್ಷಗಳಿಗೂ ಹೆಚ್ಚು ಕಾಲ ನಡೆದ ಬಹುಕೋಟಿ ವಂಚನೆಯಲ್ಲಿ ಗ್ರಾಹಕರ ಖಾತೆಗಳಿಂದ 4.58 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸಿದ ಆರೋಪದ ಮೇಲೆ ಕೋಟಾದ ಐಸಿಐಸಿಐನ ಮಾಜಿ ಬ್ಯಾಂಕ್ ಮ್ಯಾನೆಜರ್ ಸಾಕ್ಷಿ ಗುಪ್ತಾ ಅವರನ್ನು ಬಂಧಿಸಲಾಗಿದೆ. 2020 ಮತ್ತು 2023 ರ ನಡುವೆ ಕೋಟಾ ನಗರದ ಡಿಸಿಎಂ ಪ್ರದೇಶದ ಶ್ರೀರಾಮ್ ನಗರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಾಕ್ಷಿ ಗುಪ್ತಾ ಅವರನ್ನು ವಿವರವಾದ ತನಿಖೆಯ ನಂತರ ಮೇ 31 ರಂದು ಉದ್ಯೋಗ್ ನಗರ ಪೊಲೀಸರು ಬಂಧಿಸಿದರು.

ಈ ವಂಚನೆಯ ಬಗ್ಗೆ ಮೊದಲು ಫೆಬ್ರವರಿ 18 ರಂದು ವರದಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುಪ್ತಾ 41 ಗ್ರಾಹಕರ 110 ಕ್ಕೂ ಹೆಚ್ಚು ಖಾತೆಗಳಿಂದ ಹಣವನ್ನು ಲಪಟಾಯಿಸಿದ್ದಾರೆ. ಸಾಕ್ಷಿ ಗುಪ್ತಾ ಹಲವಾರು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳನ್ನು ಮೊದಲು ಬದಲಾಯಿಸಿದ್ದಾರೆ. ಬಳಿಕ ಹಣವನ್ನು ಡ್ರಾ ಮಾಡುವ ವೇಳೆ ಓಟಿಪಿಗಳನ್ನು ತಾನು ಬದಲಾಯಿಸಿದ ನಂಬರ್ ಗಳಿಗೆ ಬರುವಂತೆ ಮಾಡಿದ್ದಾರೆ. ಬಳಿಕ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಆದರೆ ಷೇರು ಮಾರಕಟ್ಟೆ ಹಣ ಸಂಪೂರ್ಣ ಕಳೆದುಕೊಂಡ ಕಾರಣ ಹಣ ಮರುಳಿಸಲು ಆಗಲಿಲ್ಲ.
ಬ್ಯಾಂಕಿನ ಗ್ರಾಹಕರೊಬ್ಬರು ತಮ್ಮ ಎಫ್ಡಿ ಬಗ್ಗೆ ವಿಚಾರಿಸಲು ಬ್ಯಾಂಕಿಗೆ ಬಂದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಬ್ಯಾಂಕ್ ಫೆಬ್ರವರಿ 18 ರಂದು ಪೊಲೀಸರಿಗೆ ದೂರು ನೀಡಿದೆ. ಕಿಲಾಡಿ ಸಾಕ್ಷಿ ಮೊದಲಿಗೆ ಖಾತೆಗಳೊಂದಿಗೆ ಲಿಂಕ್ ಮಾಡಲಾದ ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿದ್ದಾಳೆ, ಇದರಿಂದ ಅವರ ಮೊಬೈಲ್ ಸಂಖ್ಯೆ ಬ್ಯಾಂಕ್ ವಹಿವಾಟಿನ ಸಂದೇಶಗಳು ಹೋಗದಂತೆ ಮಾಡಿದ್ದಾಳೆ. ನಂತರ ಆಕೆ ಅಲ್ಲಿ ತನ್ನ ಕುಟುಂಬ ಸದಸ್ಯರ ಫೋನ್ ಸಂಖ್ಯೆಗಳನ್ನು ಹಾಕಿ ಅಪ್ಡೇಟ್ ಮಾಡಿದ್ದಾಳೆ. ಹೀಗೆ ಆಕೆ 4 ಕೋಟಿ ರೂ.ಗೂ ಹೆಚ್ಚು ಹಣವನ್ನು ಡ್ರಾ ಮಾಡಿದ್ದಾಳೆ. ಹಣ ಹೊಂದಿರುವ ಖಾತೆದಾರರಿಗೆ ವಂಚನೆಯ ಸುಳಿವು ಸಿಗದಂತೆ ಒಟಿಪಿಗಳನ್ನು ಪಡೆಯಲು ಅವಳು ಇದಕ್ಕಾಗಿ ಬ್ಯಾಂಕ್ ಬಳಸುವ ವ್ಯವಸ್ಥೆಯನ್ನೇ ಬಳಸಿಕೊಂಡಿದ್ದಾಳೆ ಎಂದು ತನಿಖಾ ಅಧಿಕಾರಿ ಇಬ್ರಾಹಿಂ ಖಾನ್ ಹೇಳಿದ್ದಾರೆ.
ಗ್ರಾಹಕರ ಹಿತಾಸಕ್ತಿ ಐಸಿಐಸಿ ಬ್ಯಾಂಕ್ಗೆ ಅತ್ಯಂತ ಮಹತ್ವದ್ದಾಗಿದೆ. ಈ ವಂಚನೆ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಪೊಲೀಸರಿಗೆ ಮಾಹಿತಿ ನೀಡಿದ್ದೆ, ಎಐಆರ್ ದಾಖಲಿಸಿದ್ದೇವೆ. ಯಾವುದೇ ವಂಚನೆಯನ್ನು ಐಸಿಐಸಿಐ ಬ್ಯಾಂಕ್ ಸಹಿಸುವುದಿಲ್ಲ. ವಂಚನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ. ಹೀಗಾಗಿ ತಕ್ಷಣವೇ ಉದ್ಯೋಗಿಯನ್ನು ಅಮಾನತು ಮಾಡಲಾಗಿದೆ. ಇದೇ ವೇಳೆ ಗ್ರಾಹಕರಿಗೆ ಆಗಿರುವ ತೊಂದರೆಯನ್ನು ತಕ್ಷಣದಲ್ಲೇ ಸರಿಪಡಿಸಲಾಗಿದೆ.
ಬ್ಯಾಂಕ್ ಮ್ಯಾನೇಜರ್ ತರುಣ್ ದಧೀಚ್ ಅವರು ವ್ಯತ್ಯಾಸಗಳನ್ನು ಗಮನಿಸಿದ ನಂತರ ದೂರು ದಾಖಲಿಸಿದರು, ಇದು ಸಂಪೂರ್ಣ ಲೆಕ್ಕಪರಿಶೋಧನೆ ಮತ್ತು ನಂತರದ ಪೊಲೀಸ್ ಕ್ರಮಕ್ಕೆ ಕಾರಣವಾಯಿತು. “ಆಕೆ ವ್ಯವಸ್ಥಿತವಾಗಿ ಹಣವನ್ನು ವರ್ಗಾಯಿಸುತ್ತಿದ್ದರು, ಕೆಲವೊಮ್ಮೆ ಚಟುವಟಿಕೆಯ ಬಗ್ಗೆ ತಿಳಿದಿಲ್ಲದ ವಯಸ್ಸಾದ ಮಹಿಳೆಯ ಖಾತೆಯನ್ನು ಪೂಲ್ ಖಾತೆಯಾಗಿ ಬಳಸುತ್ತಿದ್ದರು” ಎಂದು ಉದ್ಯೋಗ್ ನಗರ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ಇಬ್ರಾಹಿಂ ಹೇಳಿದರು.