DAKSHINA KANNADA
ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಪೊಲೀಸ್ ವಶಕ್ಕೆ ..!
ಬೆಂಗಳೂರು : ಭಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಕುಣಿಗಲ್ ನಲ್ಲಿ ಮುರಳೀಕೃಷ್ಣ ಹಸಂತ್ತಡ್ಕ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ತೂರು ನಿವಾಸಿಯಾಗಿರುವ ಮುರಳೀಕೃಷ್ಣ ಹಸಂತ್ತಡ್ಕ ತುಮಕೂರಿನಲ್ಲಿ ಇಂದು ನಡೆಯಲಿರುವ ಭಯೋತ್ಪಾದನಾ ವಿರೋಧಿ ಪ್ರತಿಭಟನಾ ರಾಲಿಯಲ್ಲಿ ಮುಖ್ಯ ಭಾಷಣಕಾರರಾಗಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರು ತೆರಳುವ ದಾರಿ ಮಧ್ಯೆಯೇ ಪೋಲೀಸರು ವಶಕ್ಕೆ ಪಡೆದಿದ್ದಾರೆ.
You must be logged in to post a comment Login