DAKSHINA KANNADA
ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮಮಂದಿರ ವಿಶ್ವಕ್ಕೇ ಪ್ರೇರಣೆಯಾಗಬೇಕು – ಈಶ ವಿಠಲದಾಸ ಸ್ವಾಮೀಜಿ
ಮಂಗಳೂರ ಅಗಸ್ಟ್ 2:ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮಂದಿರ ವಿಶ್ವಕ್ಕೇ ಪ್ರೇರಣೆಯಾಗಬೇಕು ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಬೇಕು ಎಂದು ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಸಮಾಜಕ್ಕೆ ಕರೆ ನೀಡಿದ್ದಾರೆ.
ಇದೇ ಅಗಸ್ಟ್ 5 ರಂದ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ದೇಶವಾಸಿಗಳ ಬಹುದಿನದ ಕನಸು ಇದಾಗಿದ್ದು ಈ ಮೂಲಕ ಮಹತ್ಕಾರ್ಯ ಸಾಕಾರಗೊಳ್ಳಲಿದೆ ಎಂದು ಈಶ ವಿಠಲದಾಸ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಇನ್ನು ನಿರ್ಮಾಣವಾಗಲಿರುವ ರಾಮಮಂದಿ ಹಿಂದೂ ಸಮಾಜಕ್ಕೆ ಒಂದು ದೊಡ್ಡ ಶಕ್ತಿಕೇಂದ್ರವಾಗ ರೂಪುಗೊಳ್ಳಲಿ ಎಂದ ಅವರು, ದೇಶವನ್ನು ಕಾಡುತ್ತಿರುವ ಎಲ್ಲಾ ರೋಗರುಜಿಗಳು ನಿರ್ಮೂಲನೆ ಆಗಿ ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂದು ಆಶಯಿಸಿದರು.
You must be logged in to post a comment Login