Connect with us

    LATEST NEWS

    ರಕ್ತೇಶ್ವರಿ ದೈವದ ನೇಮ ವೇಳೆ ಹೃದಯಾಘಾತ ಬಲಿಯಾದ ದೈವ ನರ್ತಕ ಅಶೋಕ್ ಬಂಗೇರ

    ಮಂಗಳೂರು ಜನವರಿ 27: ಕೊರಗಜ್ಜ ದೈವಾರಾಧಕರಾದ ಅಶೋಕ್ ಬಂಗೇರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ 47 ವರ್ಷವಾಗಿತ್ತು. ಶುಕ್ರವಾರ ದೈವ ನರ್ತನ ಮುಗಿಸುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಆಗ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸಾವನ್ನಪ್ಪಿದ್ದಾರೆ.


    ನಿನ್ನೆ ಹಳೆಯಂಗಡಿ ಸಮೀಪ ನಡೆದ ರಕ್ತೇಶ್ವರಿ ದೈವ ನೇಮದಲ್ಲಿ ದೈವ ನರ್ತನ ಮಾಡುತ್ತಿದ್ದರು. ಆಗ ಎದೆನೋವು ಕಾಣಿಸಿಕೊಂಡಿತ್ತು. ಇವರ ಕೊನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಂಗಳೂರಿನ ಪದವಿನಂಗಡಿ ಬಳಿ ಇರುವ ಕೊರಗಜ್ಜನ ಸಾನಿಧ್ಯದಲ್ಲಿ ಅವರು ಕೊರಗಜ್ಜನ ಸೇವೆ ಮಾಡಿಕೊಂಡು ಬರುತ್ತಿದ್ದರು. ಹಲವು ವರ್ಷಗಳಿಂದ ಅವರು ತಮ್ಮನ್ನು ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply