Connect with us

    LATEST NEWS

    ಅಸಾದುದ್ದೀನ್ ಓವೈಸಿ ಪೋಸ್ಟರ್ ಸುಟ್ಟ ಅಯೊಧ್ಯೆ ಅರ್ಚಕ

    ಉತ್ತರ ಪ್ರದೇಶ, ಜುಲೈ 02: ಪ್ರಚೋದನಾಕಾರಿ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಪೋಸ್ಟರ್ ಅನ್ನು ಅಯೊಧ್ಯೆಯ ತಪಸ್ವಿ ಛಾವನಿ ದೇವಾಲಯದ ಅರ್ಚಕ ಪರಮಹಂಸ ದಾಸ್ ಅವರು ಶುಕ್ರವಾರ ಸುಟ್ಟು ಹಾಕಿದ್ದಾರೆ.

    ಇವತ್ತು ಫೋಸ್ಟರ್ ಮಾತ್ರ ಸುಡಲಾಗಿದೆ. ನಾಳೆ ಪೋಸ್ಟರ್ ಬದಲು ದೇಶ ವಿರೋಧಿ ನಾಯಕರಿಗೆ ಈ ಗತಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಇದೇವೇಳೆ, ಧರ್ಮಾಂಧರಿಂದ ಟೈಲರ್ ಹತ್ಯೆ ನಡೆದ ತಮ್ಮದೇ ಪಕ್ಷದ ಸರ್ಕಾರವಿರುವ ರಾಜಸ್ಥಾನಕ್ಕೆ ಭೇಟಿ ನೀಡದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ್ದಾರೆ.

    ಓವೈಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ದಾಸ್, ಇಂತಹ ಹೇಳಿಕೆಗಳು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುತ್ತಿವೆ ಎಂದು ಆರೋಪಿಸಿದ್ದಾರೆ. ‘ಎಲ್ಲ ದೇಶವಿರೋಧಿ ನಾಯಕರು ಬುದ್ದಿ ಕಲಿಯಬೇಕು. ಇಂದು ಪೋಸ್ಟರ್ ಸುಟ್ಟಿದ್ದೇನೆ, ನಾಳೆ ಅವರನ್ನು ಜೀವಂತವಾಗಿ ಸುಡಲಾಗುತ್ತದೆ’ಎಂದು ಅವರು ಕಿಡಿಕಾರಿದ್ದಾರೆ.

    ಪೋಸ್ಟರ್ ಸುಟ್ಟು ಹಾಕುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೋಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅದನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ, ದಾಸ್ ಅವರನ್ನು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಹೊರಗೆ ಕರೆದೊಯ್ದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply