Connect with us

LATEST NEWS

ಹಿರಿಯಡ್ಕ – ವಯೋವೃದ್ದೆಯ ಸುಲಿಗೆ ಮಾಡಿದ್ದ ಕಳ್ಳ ಪೆರ್ಡೂರಿನ ಉಲ್ಲಾಸ್ ವಿಶ್ವನಾಥ್ ಶೆಟ್ಟಿ ಅರೆಸ್ಟ್

ಹಿರಿಯಡ್ಕ, ಅಕ್ಟೋಬರ್ 13: ಪೆರ್ಡೂರಿನಲ್ಲಿ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವಯೋವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಬಂಧಿತನನ್ನು ಪೆರ್ಡೂರಿನ ಉಲ್ಲಾಸ್ ವಿಶ್ವನಾಥ್ ಶೆಟ್ಟಿ(48) ಎಂದು ಗುರುತಿಸಲಾಗಿದೆ. ನೆರೆಮನೆಯ 80ವರ್ಷ ವಯಸ್ಸಿನ ವಯೋವೃದ್ಧೆ ಮನೆಯ ಹೊರಗಿನ ಬಟ್ಟೆ ಒಗೆಯುವ ಕಲ್ಲಿನ ಬಳಿ ಪಾತ್ರೆ ತೊಳೆಯುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಉಲ್ಲಾಸ್, ಅವರ ಮುಖಕ್ಕೆ ಅವರ ಸೀರೆಯ ಸೆರಗನ್ನು ಮುಸುಕು ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದನು ಎನ್ನಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಎರಡು ದಿನದಲ್ಲೇ ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ಸುಲಿಗೆ ಮಾಡಿದ 25 ಗ್ರಾಂ ತೂಕದ 88,000ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಆರೋಪಿ, ಚಿಕಿತ್ಸೆ ಪಡೆಯಲು ಹಣಕ್ಕಾಗಿ ಈ ಕೃತ್ಯ ಎಸಗಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *