KARNATAKA
ನಿಮಿಷಾಂಭ ದೇವಿಯ ಮೊರೆ ಹೊದ ಆ್ಯಂಕರ್ ಅನುಶ್ರೀ…!!
ಮಂಡ್ಯ ಅಕ್ಟೋಬರ್ 2: ಡ್ರಗ್ಸ್ ಪ್ರಕರಣಗಳ ಸಂಕಷ್ಟದ ನಡುವೆ ಆ್ಯಂಕರ್ ಅನುಶ್ರೀ ಈಗ ನಿಮಿಷಾಂಭ ದೇವಿಯ ಮೊರೆ ಹೋಗಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟದಲ್ಲಿರುವ ಪ್ರಸಿದ್ದ ನಿಮಿಷಾಂಭ ದೇವಸ್ಥಾನಕ್ಕೆ ಅನುಶ್ರೀ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಹೆಸರು ಕೇಳಿ ಬಂದಿರುವ ಹಿನ್ನಲೆ ಮಂಗಳೂರಿನಲ್ಲಿ ಸಿಸಿಬಿ ಪೊಲೀಸರ ವಿಚಾರಣೆಯನ್ನು ಎದುರಿಸಿದ್ದರು.
ಈ ಹಿನ್ನಲೆ ತಾಯಿ ನಿಮಿಷಾಂಭೆಯ ಭಕ್ತಳಾಗಿರೋ ಆ್ಯಂಕರ್ ಅನುಶ್ರೀ , ದೇವಿ ಸನ್ನಿಧಾನಕ್ಕೆ ಬಂದು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಆಗಮಿಸಿ ಈ ಡ್ರಗ್ಸ್ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಯಯಲ್ಲಿ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
You must be logged in to post a comment Login