LATEST NEWS
ನೇತ್ರಾವತಿ ನದಿ ಸೇತುವೆಯಲ್ಲಿ ಪತ್ತೆಯಾದ ಕಾರು.. ಮತ್ತೊಂದು ಆತ್ಮಹತ್ಯೆ ಶಂಕೆ…?
ನೇತ್ರಾವತಿ ನದಿ ಸೇತುವೆಯಲ್ಲಿ ಪತ್ತೆಯಾದ ಕಾರು.. ಮತ್ತೊಂದು ಆತ್ಮಹತ್ಯೆ ಶಂಕೆ…?
ಮಂಗಳೂರು ಎಪ್ರಿಲ್ 16: ಅತೀ ಹೆಚ್ಚು ಆತ್ಮಹತ್ಯೆಗಳು ದಾಖಲಾಗುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಸೇತುವೆಯಲ್ಲಿ ಬುಧವಾರ ತಡರಾತ್ರಿ ಅನಾಥ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ. ಮತ್ತೊಂದು ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ.
ಕೆ.ಎ 19 ಎಂ ಡಿ 9355 ನಂಬರಿನ ಫಿಯಟ್ ಕಾರು ಅನಾಥ ಸ್ಥಿತಿಯಲ್ಲಿ ತಡರಾತ್ರಿ 10.30 ರ ವೇಳೆ ಪತ್ತೆಯಾಗಿದೆ. ಕಾರಿನ ಲೈಟ್ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾರಿನ ಒಳಗೆ ಸೋಮೇಶ್ವರ ಕೊಲ್ಯ ನಿವಾಸಿ ರಾಜಶೇಖರ್ ಗಟ್ಟಿ ಎಂಬವರ ಪುತ್ರ ವಿಕ್ರಂ ಗಟ್ಟಿ ಎಂಬವರಿಗೆ ಸೇರಿದ ಪ್ಯಾನ್ ಕಾರ್ಡು ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕಾರು ಚಾಲಕನಿಗಾಗಿ ಶೋಧ ಮುಂದುವರಿಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login