Connect with us

LATEST NEWS

ಮಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು…..!!

ಮಂಗಳೂರು ನವೆಂಬರ್ 26: ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರಣಿ ಕೊಲೆ ಹಾಗೂ ಹಲ್ಲೆಗಳಿಂದ ಜಿಲ್ಲೆ ಸುದ್ದಿಯಾಗುತ್ತಿದೆ.  ಈ ನಡುವೆ ಮಂಗಳೂರು ನಗರದಲ್ಲಿ ನೆತ್ತರು ಹರಿದಿದೆ. ನಗರದ ಬೊಕ್ಕಪಟ್ಟಣ್ಣದ ಕರ್ನಲ್‌ ಗಾರ್ಡನ್‌ ಬಳಿ ರೌಡಿಶೀಟರ್‌ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ಆಗಿರಬಹುದೆಂದು ಶಂಕಿಸಲಾಗಿದ್ದು ಮೃತ ವ್ಯಕ್ತಿಯನ್ನು ಇಂದ್ರಜೀತ್‌ (29) ಎಂದು ಗುರುತಿಸಲಾಗಿದೆ.


ನಿನ್ನೆ ರಾತ್ರಿ ಇಂದ್ರಜಿತ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ. ಈ ಸಂದರ್ಭ ಅಲ್ಲಿ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ಹೇಳಲಾಗಿದ್ದು, ಬಳಿಕ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ಕರ್ನಲ್‌ ಗಾರ್ಡನ್‌ ಬಳಿ ಈತನನ್ನು ಇರಿದು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದ್ದು, ಈ ಹಿಂದೆ ಈತನ ಹತ್ಯೆ ಯತ್ನ ನಡೆದಿತ್ತು .

ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬರ್ಕೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ. .

Share Information
Continue Reading
Advertisement
Click to comment

Leave a Reply

Your email address will not be published. Required fields are marked *