BELTHANGADI
ಎಂಡೋಸಲ್ಪಾನ್ ಸಂತ್ರಸ್ಥೆ ಸಾವು ಕಣ್ಮುಚ್ಚಿ ಕುಳಿತ ಸರಕಾರ
ಎಂಡೋಸಲ್ಪಾನ್ ಸಂತ್ರಸ್ಥೆ ಸಾವು ಕಣ್ಮುಚ್ಚಿ ಕುಳಿತ ಸರಕಾರ
ಬೆಳ್ತಂಗಡಿ ನವೆಂಬರ್ 5: ಮಹಾಮಾರಿ ಎಂಡೋಸಲ್ಫಾನ್ ಗೆ ಮತ್ತೊಬ್ಬ ಸಂತ್ರಸ್ತೆ ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ಎಂಡೋಸಂತ್ರಸ್ಥರ ಸರಣಿಸಾವಿನ ಬಗ್ಗೆ ಸರಕಾರ ಯಾವುದೇ ರೀತಿಯ ಕ್ರಮಕೈಗೊಳ್ಳದೆ ಕಣ್ಮುಚ್ಚಿ ಕುಳಿತಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಶಾರದಾ (46) ಸಾವಿಗೀಡಾದ ಎಂಡೋ ಸಂತ್ರಸ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಕಿಡ್ನಿ ಸಮಸ್ಯೆ ಉಲ್ಬಣಗೊಂಡ ಹಿನ್ನಲೆಯಲ್ಲಿ ಸಾವಿಗೀಡಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದರೂ ಸರಕಾರ ಮಾತ್ರ ಈ ನತದೃಷ್ಟರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ ಎನ್ನುವ ಆರೋಪ ಎಂಡೋಸಲ್ಫಾನ್ ವಿರೋಧಿ ಹೋರಾಟಗಾರರದ್ದಾಗಿದೆ.
You must be logged in to post a comment Login