LATEST NEWS
ಮತ್ತೊಂದು ಆವರಣ ಗೋಡೆ ಕುಸಿತ ಪ್ರಕರಣ – ಮನೆಮಂದಿ ಹೊರಗಿದ್ದರಿಂದ ಬಚಾವ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳೂರು ಜೂನ್ 30 : ಮಂಗಳೂರಿನಲ್ಲಿ ಮುಂಗಾರು ಮಳೆಯಿಂದಾಗಿ ದುರಂತಗಳು ಸಂಭವಿಸುತ್ತಿದ್ದು, ಉಳ್ಳಾಲದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಆವರಣ ಕುಸಿದ ಘಟನೆ ನಗರದ ಹೊರವಲಯದ ಬಜಾಲ್ನ ಪಳ್ಳಕೆರೆ ಎಂಬಲ್ಲಿ ನಡೆದಿದೆ.
ಬಜಾಲ್ನ ಪಳ್ಳಕೆರೆ ಎಂಬಲ್ಲಿನ ಖಾಲಿ ಜಾಗದ ಕಂಪೌಂಡ್ ಗೊಡೆಯೊಂದು ಮನೆಯೊಂದರ ಮೇಲೆ ಕುಸಿದ ಪರಿಣಾಮ ಮನೆಗೆ ಹಾನಿಯಾಗಿದೆ.ಅಪರಾಹ್ನ 3 ಗಂಟೆ ಹೊತ್ತಿಗೆ ಸೈಟ್ನ ಆವರಣಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಪಳ್ಳಕೆರೆಯ ರಾಧಾಕೃಷ್ಣ ಎಂಬವರ ಮನೆಗೆ ಹಾನಿಯಾಗಿದೆ. ಸೈಟ್ನ ಆವರಣಗೋಡೆಯ ಮಣ್ಣು, ಕಲ್ಲು , ಸ್ಲಾಬ್ ಮನೆ ಹಾಗೂ ಬಚ್ಚಲು ಮನೆಯ ಮೇಲೆ ಬಿದ್ದಿದೆ. ಮನೆಯ ಒಂದು ಕೋಣೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಮನೆ ಮಂದಿ ಹೊರಗ ಇದ್ದದರಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
You must be logged in to post a comment Login