Connect with us

    LATEST NEWS

    ಮಂಗಳೂರು ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವ್ರತ

    ಮಂಗಳೂರು : ಅನಂತ ಚತುರ್ದಶಿ ವ್ರತ ( ನೊಪಿ ) ಪ್ರಯುಕ್ತ ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಸರ್ವಾಭರಣದೊಂದಿಗೆ ಅಲಂಕರಿಸಿ ಪೂಜೆ ನೆರವೇರಿತು .

    ಪ್ರಾರಂಭದಲ್ಲಿ ಶ್ರೀ ಅನಂತ ಕಲಶ ಪ್ರತಿಷ್ಠೆ , ವಿದ್ವತ್ ವೈದಿಕರಿಂದ ಪೂಜಾ ಕೈಕರ್ಯ ಗಳು ನೆರವೇರಿದವು , ಶ್ರೀ ಅನಂತ ದೇವರ ವಿಶೇಷ ಮುಖ ಕಲಶದ ಮೇಲೆ ಸಿಂಗರಿಸಿ , ದೇವಳದ ಪರಿಸರವನ್ನು ಹೂ , ಹಣ್ಣು ಹಂಪಲು , ತರಕಾರಿಗಳಿಂದ ಸಿಂಗರಿಸಲಾಯಿತು . ದಿನವಿಡೀ ದೇವಳ ಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಸಮಾರಾಧನೆ ನಡೆಯಿತು . ಇದೆ ಸಂದರ್ಭದಲ್ಲಿ ರಥಬೀದಿಯಲ್ಲಿರುವ ಶ್ರೀ ಮಹಾಮಾಯ ದೇವಸ್ಥಾನ , ಶ್ರೀ ಗೋಕರ್ಣ ಪರ್ತಗಾಳಿ ಮಠದ ಮಂಗಳೂರು ಶಾಖ ಮಠ , ಶ್ರೀ ಕಾಳಿಂಗಮರ್ಧನ ಮಹಾಲಸಾ ನಾರಾಯಣಿ ದೇವಳ , ಕಾತ್ಯಾಯನಿ ಮಠ , ಪಾರ್ವತಾಚಾರ್ಯ ಮಠ , ವರದರಾಜ ಮಠ , ನಂದಾದೀಪ ದೇವಸ್ಥಾನ , ಉಮಾ ಮಹೇಶ್ವರ ದೇವಸ್ಥಾನ, ಬಾಲಮ್ ಭಟ್ ದೇವಸ್ಥಾನ , ಜೋಡು ಮಠ , ಗೊಲ್ಲರಕೇರಿ ದೇವಸ್ಥಾನ , ಆಚಾರ್ಯ ಮಠ ಗಳಲ್ಲಿ ಸಹ ಅನಂತ ಚತುರ್ಥಿ ವ್ರತ ಆಚರಿಸಲಾಯಿತು .

    ಚಿತ್ರ : ಮಂಜು ನೀರೇಶ್ವಾಲ್ಯ

    Share Information
    Advertisement
    Click to comment

    You must be logged in to post a comment Login

    Leave a Reply