Connect with us

MANGALORE

ಮಂಗಳೂರು -ಅಂಬೇಡ್ಕರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಮಂಗಳೂರು ನವೆಂಬರ್ 30 : ಅಂಬೇಡ್ಕರ್ ಚಿಂತನೆಗಳನ್ನು ಯುವ ಪೀಳಿಗೆ ಅಭ್ಯಸಿಸಿ, ಅಳವಡಿಸಿಕೊಂಡಾಗ, ದೇಶಕ್ಕೆ ಮುಂದಿನ ಭವಿಷ್ಯವಾಗಿ ವ್ಯಕ್ತಿತ್ವ ರೂಪುಗೊಳ್ಳಲಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ನಂತೂರು ಶ್ರೀ ಕೊರಗಜ್ಜ ಗುಡಿಯ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಏಕತೆಯ ಕುರಿತು, ಸಾಮಾಜಿಕ ಸಮಾನತೆಯ ಕುರಿತು ದೂರ ದೃಷ್ಟಿಯ ಚಿಂತನೆಯಿಂದ ನಿರ್ಮಿಸಿದ ಸಂವಿಧಾನವು ಈ ದೇಶದ ಭದ್ರ ಬುನಾದಿ. ಅವರ ಚಿಂತನೆಗಳನ್ನು ಸಮಾಜದ ಯುವ ಪೀಳಿಗೆಗಳಲ್ಲಿ ಬಿತ್ತುವ ಮೂಲಕ ಅವರಲ್ಲಿ ರಾಷ್ರ್ಟಾಭಿಮಾನ ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.
ನಂತೂರು ಪರಿಸರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವ‌ ಕುರಿತು‌ ಸ್ಥಳೀಯರು ಸ್ಥಳೀಯ ಕಾರ್ಪೋರೇಟರ್ ಮೂಲಕ ಸಲ್ಲಿಸಿದ ಬೇಡಿಕೆಯಂತೆ 20 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *