LATEST NEWS
ರಸ್ತೆಗಳಿದ ಎಲ್ಲಾ ವಾಹನ ಜಪ್ತಿ ಮಾಡಲು ಪೊಲೀಸ್ ಆಯುಕ್ತರ ಆದೇಶ

ರಸ್ತೆಗಳಿದ ಎಲ್ಲಾ ವಾಹನ ಜಪ್ತಿ ಮಾಡಲು ಪೊಲೀಸ್ ಆಯುಕ್ತರ ಆದೇಶ
ಮಂಗಳೂರು ಎ. 11: ಇಂದಿನಿಂದ ಮಂಗಳೂರಿನಲ್ಲಿ ರಸ್ತೆಗಿಳಿದ ಎಲ್ಲಾ ವಾಹನಗಳನ್ನು ಸೀಝ್ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಆದೇಶಿಸಿದ್ದಾರೆ.
ಜಿಲ್ಲಾಡಳಿತದ ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೇರೆ ಯಾವುದೇ ವಾಹನ ರಸ್ತೆಗಳಿದರೆ ವಾಹನಗಳನ್ನು ಸೀಝ್ ಮಾಡಿ ಕೋರ್ಟ್ ಗೆ ಪ್ರೊಡ್ಯೂಸ್ ಮಾಡಲಿದ್ದಾರೆ ಪೊಲೀಸರು. ಈ ಹಿಂದೆ ಅನಗತ್ಯವಾಗಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿ ನಂತರ ದಂಡ ವಿಧಿಸಿ ವಾಹನ ಬಿಡುತ್ತಿದ್ದರು. ಈಗ ಈ ನಿರ್ಧಾರವನ್ನು ಬದಲಸಿರುವ ಮಂಗಳರು ಪೊಲೀಸ್ ಆಯುಕ್ತ ಹರ್ಷ ವಾಹನ ಜಪ್ತಿ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಆದೇಶಿಸಿದ್ದಾರೆ.
