Connect with us

    KARNATAKA

    ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್

    ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್

    ಬೆಂಗಳೂರು ಜುಲೈ28: ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಮೂವರು ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಇಂದು ಮತ್ತೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದಾರೆ.

    ಪ್ರತಾಪಗೌಡ ಪಾಟೀಲ್ – ಮಸ್ಕಿ, ಬಿ.ಸಿ ಪಾಟೀಲ್ – ಹಿರೇಕೆರೂರು, ಶಿವರಾಮ್ ಹೆಬ್ಬಾರ್ – ಯಲ್ಲಾಪುರ, ಎಸ್.ಟಿ. ಸೋಮಶೇಖರ್ – ಯಶವಂತಪುರ, ಭೈರತಿ ಬಸವರಾಜು – ಕೆ.ಆರ್.ಪುರ, ಆನಂದ್ ಸಿಂಗ್ – ವಿಜಯನಗರ, ಬಳ್ಳಾರಿ, ಆರ್.ರೋಷನ್ ಬೇಗ್ – ಶಿವಾಜಿನಗರ, ಮುನಿರತ್ನ – ರಾಜರಾಜೇಶ್ವರಿ ನಗರ, ಕೆ. ಸುಧಾಕರ್ – ಚಿಕ್ಕಬಳ್ಳಾಪುರ, ಎಂ.ಟಿ.ಬಿ. ನಾಗರಾಜ್ – ಹೊಸಕೋಟೆ ಇವರನ್ನು ಅನರ್ಹಗೊಳಿಸಲಾಗಿದೆ

    ಇಂದು ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸ್ವೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಕುಮಾರಸ್ವಾಮಿ ಸಲ್ಲಿಸಿದ ಅನರ್ಹತೆಯ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಎಲ್ಲಾ 13 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply