Connect with us

    DAKSHINA KANNADA

    ಗುಡಿಸಲಲ್ಲಿದ್ದ ಮನೆಗಳಿಗೆ ಹೊಸ ಮನೆ, ವಿಕ್ರಮ ಫೌಂಡೇಶನ್ ಮತ್ತು ಹಿಂದೂ ಜಾಗರಣ ವೇದಿಕೆಯಿಂದ ಕೊಡುಗೆ

    ಸುಳ್ಯ, ಅಕ್ಟೋಬರ್ 03: ಹಿಂದೂ ಜಾಗರಣ ವೇದಿಕೆ ಸುಳ್ಯ ಘಟಕ ಮತ್ತು ವಿಕ್ರಮ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ಮೂರು ಬಡ ಕುಟುಂಬಗಳಿಗೆ ನೂತನ ಮನೆ ಹಸ್ತಾಂತರ ಮಾಡಲಾಗಿದೆ.

    ಸುಳ್ಯದ ಮಂಡೆಗೋಲಿನಲ್ಲಿ ಗುಡಿಸಲಲ್ಲಿ ವಾಸಿಸುತ್ತಿದ್ದ ಕುಟುಂಬಗಳಿಗೆ ಈ ಮನೆಗಳನ್ನು ಹಸ್ತಾಂತರಿಸಲಾಗಿದ್ದು, ವಿಕ್ರಮ್ ಫೌಂಡೇಶನ್ ನಿರ್ದೇಶಕ ಮಹೇಶ್ ವಿಕ್ರಂ ಹೆಗಡೆ, ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿದರು.

    ತಲಾ ಒಂದು ಮನೆಗೆ ಸುಮಾರು 6 ಲಕ್ಷ ವೆಚ್ಚ ತಗುಲಿದ್ದು, ಹಿಂದೂ ಜಾಗರಣ ವೇದಿಕೆ ಒಂದು ಮನೆಯನ್ನು ಕಟ್ಟಿ ಹಸ್ತಾಂತರಿಸಲು ಮೊದಲು ನಿರ್ಧರಿಸಿತ್ತು.ಈ ವಿಚಾರವನ್ನು ಅರಿತ ವಿಕ್ರಮ ಫೌಂಡೇಶನ್ ನ ಮಹೇಶ್ ವಿಕ್ರಂ ಹೆಗಡೆ ಬಡ ಕುಟುಂಬಗಳನ್ನು ಗುರುತಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮತ್ತೆರಡು ಮನೆಗಳನ್ನು ಕಟ್ಟಿ ಕೊಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply