Connect with us

KARNATAKA

ಮಕ್ಕಳ ಕೈಗೆ ಸಿಕ್ಕಿದ ಸಿಡಿ ಮದ್ದಿನ ಉಂಡೆ :ತಪ್ಪಿತು ಅನಾಹುತ- ಶ್ವಾನ ಮೃತ್ಯು..!

ತುಮಕೂರು : ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆ ಶಾಲಾ ಮಕ್ಕಳ ಕೈಗೆ ಸಿಕ್ಕು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದೇನಹಳ್ಳಿಯಲ್ಲಿ ನಡೆದಿದೆ.

ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆಯನ್ನು ಬಾಲ್ ಅಂತ ಭಾವಿಸಿದ್ದ ಬಾಲಕರಿಬ್ಬರು ಅದನ್ನು ತಮ್ಮ ಬಳಿ ಇಟ್ಟುಕೊಂಡು ಓಡಾಡಿದ್ದಾರೆ. ಯುವರಾಜ ಹಾಗೂ ಶ್ರೀನಿವಾಸ್ ಎಂಬ ಬಾಲಕರಿಗೆ ಸಿಕ್ಕಿದ್ದ ಈ ಉಂಡೆ ಸ್ಪೋಟಕವೆಂಬ ಅರಿವಿರಲಿಲ್ಲ . ಶ್ರೀನಿವಾಸ್ ನಿಗೆ ನೀಡಿದ್ದ ಯುವರಾಜ, ಆ ಸ್ಪೋಟಕ ಉಂಡೆಯನ್ನು ಮನೆಗೆ ತಂದು ತಂದೆಗೆ ನೀಡಿದ್ದನು. ಇದು ಯಾವುದೋ ವಾಮಾಚಾರದ ಉಂಡೆಯಿರಬಹುದೆಂದು ಭಾವಿಸಿದ ಶ್ರೀನಿವಾಸ್ ದೂರಕ್ಕೆ ಅದನ್ನು ಎಸೆದಿದ್ದರು.ಶ್ರೀನಿವಾಸ್ ತಂದೆ ಎಸೆದ ಉಂಡೆಯನ್ನು ಅಲ್ಲಿಯೇ ಇದ್ದ ಬೀದಿನಾಯಿ ಕಚ್ಚಿತ್ತು. ನಾಯಿ ಕಚ್ಚುತ್ತಿದ್ದಂತೆ ಮದ್ದಿನ ಉಂಡೆ ಸ್ಫೋಟಗೊಂಡಿದೆ. ಸ್ಫೋಟಗೊಳ್ಳುತ್ತಿದ್ದಂತೆ ಬಾಯಿ ಛಿದ್ರಗೊಂಡ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆಯಗಿದೆ ಎಂಬುದು ಖಚಿತವಾಗಿದೆ. ಶಾಲೆ ಪಕ್ಕದಲ್ಲಿ ಯಾರು ಎಸೆದಿದ್ದರು ಎಂಬ ಅಂಶ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳೊಂದಿಗೆ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಇನ್ನು ಈ ಪ್ರಕರಣದ ಸಂಬಂಧ ಬುಕ್ಕಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *