Connect with us

DAKSHINA KANNADA

ಪುತ್ತೂರಿನ ಕೆಫೆಯಲ್ಲಿ ಸರ್ವಧರ್ಮಕ್ಕೆ ಸೇರಿದ ಗೆಳೆಯ ಗೆಳತಿಯರ ಗೆಟ್ ಟುಗೆದರ್ – ಸಂಘಟನೆಯ ಯುವಕರಿಂದ ಆಕ್ಷೇಪ, ಪೊಲೀಸರಿಂದ ವಿಚಾರಣೆ.

ಪುತ್ತೂರು, ಆಗಸ್ಟ್ 25: ಬಸ್ಸು ನಿಲ್ದಾಣದ ಸಮೀಪದ ಕೆಫೆ ಒಂದರಲ್ಲಿ ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿಯರು ಜತೆಯಾಗಿ ಕೂತು ಆಹಾರ ಸೇವಿಸಿದ ಘಟನೆ ಆ 25 ರಂದು ಮಧ್ಯಾಹ್ನ ನಡೆದಿದೆ.

ಇದನ್ನು ವಿರೋಧಿಸಿ ಹಿಂದುತ್ವವಾದಿ ಸಂಘಟನೆಯ ಕೆಲ ಯುವಕರು ಕೆಫೆ ಮುಂಭಾಗ ಜಮಾವಣೆಗೊಂಡಿದ್ದಾರೆ. ಈ ಮಾಹಿತಿ ತಿಳಿದ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲ ತಿಳಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಮೂಲಗಳಿಂದ ಲಭಿಸಿದ ಮಾಹಿತಿಯ ಪ್ರಕಾರ, ಇಬ್ಬರು ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವತಿ, ಹಿಂದೂ ಸಮುದಾಯಕ್ಕೆ ಸೇರಿದ ಓರ್ವ ಯುವತಿ ಹಾಗೂ ಹಾಗೂ ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕರು ಕೆಫೆಗೆ ಗೆಟ್‌ ಟುಗೆದರ್‌ಗೆ ಆಗಮಿಸಿದ್ದಾರೆ. ಇದನ್ನು ಗಮನಿಸಿದ ಸಂಘಟನೆಯೊಂದರ ಕಾರ್ಯಕರ್ತರು ಪುತ್ತೂರು ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply