Connect with us

    LATEST NEWS

    ಕದ್ರಿ ಮಂಜುನಾಥ ದೇವಸ್ಥಾನದ ಧ್ವನಿ ವರ್ದಕದಿಂದ ಸಾರ್ವಜನಿಕ ನೆಮ್ಮದಿ ಹಾಳು : ದೂರು ದಾಖಲು

     ಕದ್ರಿ ಮಂಜುನಾಥ ದೇವಸ್ಥಾನದ ಧ್ವನಿ ವರ್ದಕದಿಂದ ಸಾರ್ವಜನಿಕ ನೆಮ್ಮದಿ ಹಾಳು : ದೂರು ದಾಖಲು

    ಮಂಗಳೂರು,ಡಿಸೆಂಬರ್ 23 : ಇತಿಹಾಸ ಪ್ರಸಿದ್ದ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಧ್ವನಿವರ್ಧಕದಲ್ಲಿ ಹಾಕುವ ಶ್ಲೋಕವನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

    ಧ್ವನಿ ವರ್ಧಕಗಳನ್ನು ಬಳಸುವುದರಿಂದ ಸ್ಥಳೀಯ ನಿವಾಸಿಗಳ ನೆಮ್ಮದಿ ಹಾಳಾಗಿದೆ.

    ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಂದು ಕೆಲ ಸ್ಥಳೀಯ ನಿವಾಸಿಗಳು ಮಂಗಳೂರು ಮೇಯರ್ ಹಾಗೂ ಮುಜರಾಯಿ ಇಲಾಖೆಗೆ ದೂರು ನೀಡಿದ್ದಾರೆ.

    ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಸೇರಿದಂತೆ ಕೆಲವು ಕ್ರೈಸ್ತ ಧರ್ಮೀಯರು ನೀಡಿದ ದೂರನ್ನು ಮುಜರಾಯಿ ಇಲಾಖೆ ಸ್ವೀಕರಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದೆ.

    ದೂರೀನಲ್ಲಿ ಏನೀದೆ ?:

    ಕದ್ರಿ ದೇವಸ್ಥಾನದ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಹಾಕುತ್ತಿದ್ದು ಇದರಿಂದ ತೊಂದರೆಯಾಗುತ್ತಿದೆ. ದೇವಸ್ಥಾನದ ಧ್ವನಿವರ್ಧಕದಿಂದ ಹಾಕುವ ಶ್ಲೋಕಾ, ಭಕ್ತಿ ಗೀತೆಗಳಿಂದ ಸ್ಥಳೀಯ ಪ್ಲಾಟ್ ಗಳಲ್ಲಿ ನೆಲೆಸುವವರಿಗೆ ತೊಂದರೆಯಾಗುತ್ತಿದೆ.

    ಸುತ್ತ ಮುತ್ತಲ ಮನೆಗಳಲ್ಲಿ ವಾಸಿಸುವ ಆನೇಕ ವೃದ್ದರಿಗೆ, ಮಕ್ಕಳಿಗೆ, ಆಶಕ್ತರಿಗೆ, ತೊಂದರೆಯಾಗುತ್ತಿದೆ.

    ಈ ಕರ್ಕಶ ಶಬ್ದದಿಂದ ಆರೋಗ್ಯದ ಮೇಲೂ ಸಮಸ್ಯೆಗಳಾಗಿ, ಅಧಿಕ ರಕ್ತದೊತ್ತಡ, ಮೈಗ್ರೇನ್, ನಿದ್ರಾ ಹೀನತೆ ಯಂತಹ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

    ಇದನ್ನು ದೇವಸ್ಥಾನದ ಒಳಭಾಗಕ್ಕೆ ಕೇಳಿಸುವಂತೆ ಮಾತ್ರ ಹಾಕಲು ಕ್ರಮ ಕೈಕೊಳ್ಳಬೇಕು.
    ಈ ದೂರು ಮತ್ತು ಇಲಾಖೆಯ ಕ್ರಮ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

    ಅನೇಕರು ದೂರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜನರ ಶ್ರದ್ಧಾ ಭಕ್ತಿಯ ಕೇಂದ್ರವಾದ ಕದ್ರಿಯ ದೇವಸ್ಥಾನದಲ್ಲಿ ಹಾಕುವ ಶ್ಲೋಕ,ಭಕ್ತಿಗೀತೆಗಳಿಗೆ ಕಡಿವಾಣ ಹಾಕುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಅನ್ಯಧರ್ಮೀನ ಮನವಿಗೆ ಸ್ಪಂದಿಸಿ ಧ್ವನಿವರ್ಧಕ ದಲ್ಲಿ ಹಾಕುವ ಭಕ್ತಿ ಗೀತೆಗಳನ್ನು ನಿಲ್ಲಿಸಿದ್ರೆ, ಅಥವಾ ಮುಂದಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

    Share Information
    Advertisement
    Click to comment

    You must be logged in to post a comment Login

    Leave a Reply