Connect with us

LATEST NEWS

ಸಂಸದ ಪ್ರತಾಪ್ ಸಿಂಹ ಮುನುಷ್ಯನೋ ಅಥವಾ ಪ್ರಾಣಿಯೋ – ಪ್ರಕಾಶ್ ರೈ ಪ್ರಶ್ನೆ

ಸಂಸದ ಪ್ರತಾಪ್ ಸಿಂಹ ಮುನುಷ್ಯನೋ ಅಥವಾ ಪ್ರಾಣಿಯೋ – ಪ್ರಕಾಶ್ ರೈ ಪ್ರಶ್ನೆ

ಮಂಗಳೂರು ಡಿಸೆಂಬರ್ 22: ಸಂಸದ ಪ್ರತಾಪ್ ಸಿಂಹ್ ಮನುಷ್ಯನೋ ಅಥವಾ ಪ್ರಾಣಿಯೋ ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಅವರು ಇಂದು ನಡೆದ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಕ್ಷಿಣಕನ್ನಡ ಜಿಲ್ಲಾಡಳಿತ ಆಯೋಜಿಸಿದ್ದ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಕಾರ್ಯಕ್ರಮವನ್ನು ಬಹುಭಾಷಾ ನಟ ಪ್ರಕಾಶ್ ರೈ ಉದ್ಘಾಟಿಸಿದರು. ಈ ನಡುವೆ ಪ್ರಕಾಶ್ ರೈ ಅವರು ಕರಾವಳಿ ಉತ್ಸವ ಉದ್ಘಾಟನೆಗೆ ಸೋಶಿಯಲ್ ಮಿಡಿಯಾಗಳಲ್ಲಿ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಭಾರಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಕಾಶ್ ರೈ ಸಂಸದ ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದರು. ಪ್ರಕಾಶ್ ರೈ ಹಾಗೂ ಪ್ರಕಾಶ್ ರಾಜ್ ಎಂಬ ಹೆಸರಿನ ಎರಡು ಹೆಸರಿಟ್ಟು ಧ್ವಂದ್ವ ಬದುಕು ಬಾಳುತ್ತಿದೇನೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಮಾತನಾಡಿದ ಅವರು ನನ್ನ ಹೆಸರು ಪ್ರಕಾಶ್ ರೈ, ಸಿನಿಮಾದಲ್ಲಿ ಪ್ರಕಾಶ್ ರಾಜ್ ಆಗಿ ನಾನು ನಟಿಸುತ್ತೇನೆ ಎಂದರು. ನನ್ನನ್ನು ಪ್ರಶ್ನಿಸುವ ನೀವು ರಜನಿಕಾಂತ್, ರಾಜ್ ಕುಮಾರ್, ವಿಷ್ಣುವರ್ಧನ್ ಮೂಲ ಹೆಸರನ್ನು ಪ್ರಶ್ನಿಸುತ್ತೀರಾ ಎಂದು ಹೇಳಿದರು. ನನಗಿಂತ ನೀವು ಕನ್ನಡಿಗರಲ್ಲ ಎಂದು ಹೇಳಿದ ಪ್ರಕಾಶ್ ರೈ, ಸಂಸದರಾದ ನಿಮಗೆ ಭಾಷೆ ಗೊತ್ತಿಲ್ಲ , ನಿಮ್ಮದು ಅವಾಚ್ಯ ಭಾಷೆ, ನನ್ನದು ಮನುಷ್ಯ ಭಾಷೆ ಎಂದರು.

ಪ್ರತಾಪಸಿಂಹ ಹೆಸರಲ್ಲಿ ಸಿಂಹದ ಹೆಸರಿದೆ ಹಾಗಾಗಿ ನೀವು ಮನುಷ್ಯನೋ ಅಥವಾ ಪ್ರಾಣಿನೋ ಎಂದು ಪ್ರಶ್ನಿಸಿದ ಪ್ರಕಾಶ್ ರೈ. ನೀವು ಅನ್ನ ತಿನ್ನುತ್ತೀರಾ ಅಥವಾ ಪ್ರಾಣಿಗಳ ರೀತಿ ಬೇಟೆಯಾಡುತ್ತೀರಾ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದರು.

 

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *