Connect with us

    LATEST NEWS

    ಉಡುಪಿ ಜಿಲ್ಲಾಡಳಿತಕ್ಕೆ ತಲೆನೋವು ತಂದ…ಮದ್ಯಪಾನಿಗಳ ಸರಣಿ ಆತ್ಮಹತ್ಯೆ

    ಉಡುಪಿ ಜಿಲ್ಲಾಡಳಿತಕ್ಕೆ ತಲೆನೋವು ತಂದ…ಮದ್ಯಪಾನಿಗಳ ಸರಣಿ ಆತ್ಮಹತ್ಯೆ

    ಉಡುಪಿ ಮಾರ್ಚ್ 31: ಕೊರೊನಾ ಲಾಕ್ ಡೌನ್ ನಿಂದಾಗಿ ಉಡುಪಿಯಲ್ಲಿ ಮದ್ಯಪಾನಿಗಳ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮದ್ಯಪಾನ ಸಿಗದೇ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾಡಳಿತಕ್ಕೆ ಕೊರೊನಾದ ಜೊತೆಗೆ ಮತ್ತೊಂದು ತಲೆನೋವು ತಂದಿಟ್ಟಿದೆ.

    ಕೊರೊನಾ ಸೋಂಕು ಹರಡುವಿಕೆ ತಡೆಗೆ ರಾಜ್ಯವನ್ನು ಲಾಕ್‌ಡೌನ್‌ ಮಾಡಲಾಗಿದೆ. ಒಂದೆಡೆ ಅಗತ್ಯ ವಸ್ತುಗಳ ಖರೀದಿಗೆ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ವ್ಯಸನಿಗಳು ಮದ್ಯಕ್ಕೆ ಹಾತೊರೆಯುತ್ತಿದ್ದಾರೆ. ಮದ್ಯ ಮಾರಾಟ ಬಂದ್‌ ಆಗಿರುವುದರಿಂದ ಕೆಲವರು ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲೂ ಅನೇಕ ಕಡೆಗಳಲ್ಲಿ ಇಂತಹ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

    ಆದರೆ ಸುಶಿಕ್ಷಿತರ ಜಿಲ್ಲೆಯೆಂದೇ ಕರೆಯಲ್ಪಡುವ ಉಡುಪಿ ಜಿಲ್ಲೆಯ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ದಿನಗಳಲ್ಲಿ ಆರು‌ ಮಂದಿ ಸುಸೈಡ್ ಮಾಡಿಕೊಂಡಿದ್ದು, ಇಂದು ಮತ್ತೊಂದು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಪ್ರಕರಣದಲ್ಲೂ ಆತ್ಮಹತ್ಯೆ ಮಾಡಿಕೊಂಡವರು ವಿಪರೀತ ಮದ್ಯಪಾನದ ಚಟ ಹೊಂದಿದ್ದರು ಎಂದು ಹೇಳಲಾಗಿದೆ.

    ಕಾರ್ಕಳದ ತೆಳ್ಳಾರು ಗ್ರಾಮದ ನಾಗೇಶ್ ಆಚಾರ್ಯ (37)
    ಕಾಪು ತಾಲೂಕು ಪಡು ಗ್ರಾಮದ ಶಶಿಧರ ಸುವರ್ಣ (46)
    ಕುಂದಾಪುರ ತಾಲೂಕು ಹೆಮ್ನಾಡಿಯ ರಾಘವೇಂದ್ರ (37)
    ಕಾರ್ಕಳ ತಾಲೂಕು ವರಂಗ ಗ್ರಾಮದ ಅರವಿಂದ (37)
    ಬೆಳ್ಳಂಪಳ್ಳಿ ಗ್ರಾಮ ಕುಕ್ಕಿಕಟ್ಟೆಯಲ್ಲಿ ವಿಷ ಸೇವಿಸಿ ಸತ್ತ ವಾಲ್ಟರ್ ಡಿಸೋಜ(57)
    ಉದ್ಯಾವರ ಗ್ರಾಮದ ಗಣೇಶ(42)
    ಕಾಪುವಿನ ಕುರ್ಕಾಲು ಗ್ರಾಮ ನಿವಾಸಿ ಪಾಂಡು ಪೂಜಾರಿ (68)

    ಅಲ್ಲದೆ ಮತ್ತೊಂದು ಪ್ರಕರಣದಲ್ಲಿ ಮದ್ಯ ಸಿಗದೆ ಆತ್ಮಹತ್ಯೆಗೆ ಯುವಕನೊಬ್ಬ ಯತ್ನಿಸಿದ್ದು ಆತನನ್ನು ಸಮಾಜ ಸೇವಕ ನಿತ್ಯಾನಂದ ವಳಕಾಡು ರಕ್ಷಿಸಿದ್ದಾರೆ. ಆತ್ಮಹತ್ಯೆ ಪ್ರಯತ್ನಿಸಿದ ವ್ಯಕ್ತಿಯನ್ನು ತಮಿಳ್ನಾಡು ಮೂಲದ ಧರ್ಮಪುರಿ ನಿವಾಸಿ ಧನಪಾಲ್ ಎಂದು ಗುರುತಿಸಲಾಗಿದ್ದು, ಯುವಕನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply