Connect with us

LATEST NEWS

ಮೈಸೂರಿನ ಯದುವಂಶಕ್ಕೆ ಯುವರಾಜನ ಆಗಮನ

ಮೈಸೂರಿನ ಯದುವಂಶಕ್ಕೆ ಯುವರಾಜನ ಆಗಮನ

ಮೈಸೂರು ಡಿಸೆಂಬರ್ 6: ಮೈಸೂರಿನ ಯದುವಂಶಕ್ಕೆ ಯುವರಾಜನ ಆಗಮನ. ಮೈಸೂರಿನ ಮಹಾರಾಜ ಯದುವೀರ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ತ್ರಿಷಿಕಾಗೆ ಇಂದು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮೈಸೂರಿನಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2013ರಲ್ಲಿ ಶ್ರೀಕಂಠದತ್ತ ಒಡೆಯರ ಮರಣದ ನಂತರ 2015 ರಲ್ಲಿ ಮಹಾರಾಣಿ ಪ್ರಮೋದಾ ದೇವಿ ಅವರು ತಮಗೆ ಮಕ್ಕಳಿಲ್ಲದ ಕಾರಣ ಯದುವೀರ ಅವರನ್ನು ಮೈಸೂರು ರಾಜ ವಂಶಕ್ಕೆ ದತ್ತು ತೆಗೆದುಕೊಂಡಿದ್ದರು.

2016ರಲ್ಲಿ ರಾಜಸ್ಥಾನದ ರಾಜ ವಂಶದ ತ್ರಿಷಿಕಾ ಕುಮಾರಿ ಅವರನ್ನು ವರಿಸಿದ್ದರು. ನೂರಾರು ವರ್ಷಗಳಿಂದ ಮೂಲ ವಂಶಸ್ಥರಿಗೆ ಮಕ್ಕಳಾಗಿರಲಿಲ್ಲ. ಸಾರ್ವಜನಿಕರು ಇದನ್ನು ಶಾಪ ಎಂದು ಭಾವಿಸಿದ್ದರು. ಇದೇ ಮೊದಲ ಬಾರಿಗೆ ಯದುವೀರ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *