Connect with us

BELTHANGADI

ಬಶೀರ್ ಸಾವಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ

ಬಶೀರ್ ಸಾವಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ

ಬೆಳ್ತಂಗಡಿ ಜನವರಿ 7: ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಶೀರ್ ಸಾವಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಮಾನಾಥ ರೈ ಈ ಹತ್ಯೆಗಳಲ್ಲಿ ಕಾಣದ ಕೈವಾಡ ಇದೆ ಎಂದು ಆರೋಪಿಸಿದರು. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಕೃತ್ಯಗಳು ನಡೆಯತ್ತಿದ್ದು ಕಾಂಗ್ರೇಸ್ ಸೋಲಿಸಲು ಈ ರೀತಿಯ ಹತ್ಯೆಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಹತ್ಯೆಗಳಲ್ಲಿ ಕಾಂಗ್ರೇಸ್ ನ ಪಾತ್ರ ಇಲ್ಲ ಎಂದು ಹೇಳಿದರು. ಸಂಘಪರಿವಾರದವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಜನರಲ್ಲಿ ಮತೀಯ ಭಾವನೆ ಕೆರಳಿಸುತ್ತಾರೆ ಎಂದು ರಮಾನಾಥ ಆರೋಪಿಸಿದರು. ಸಿಎಂ ಕಾರ್ಯಕ್ರಮ ಬಳಿಕ ಬಶೀರ್ ಮನೆಗೆ ಭೇಟಿ ನೀಡಲಿದ್ದೇನೆ ಎಂದು ರಮಾನಾಥ ರೈ ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *