Connect with us

LATEST NEWS

ಪವನ ಪುತ್ರ ಅಭಿನಂದನ್ ಮೀಸೆಗೆ ಫಿದಾ ಆದ ಮಂಗಳೂರಿನ ಯುವಕರು

ಪವನ ಪುತ್ರ ಅಭಿನಂಧನ್ ಮೀಸೆಗೆ ಫಿದಾ ಆದ ಮಂಗಳೂರಿನ ಯುವಕರು

ಮಂಗಳೂರು, ಮಾರ್ಚ್ 04 : ಶತ್ರು ರಾಷ್ಟ್ರ ಪಾಕಿಸ್ತಾನದ ಕಪಿ ಮುಷ್ಟಿಯಿಂದ ಪಾರಾಗಿ ಬಂದ ಎಂಟೆದೆ ಬಂಟ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆ ನಗರದ ಯುವಕರಲ್ಲಿ ವಿಶೇಷ ಆಕರ್ಷಣೆ ಉಂಟು ಮಾಡಿದೆ.

ಮಂಗಳೂರಿನಲ್ಲಿ ಬಹುತೇಕ ಯುವಕರು ವಾಯುಪುತ್ರ ಅಭಿನಂದನ್‌ ನ ವಿಶಿಷ್ಟ ಮೀಸೆಗೆ ಫಿದಾ ಆಗಿದ್ದಾರೆ.

ಅಭಿನಂದನ್‌ ನಂತೆಯೇ ತಮ್ಮ ಮೀಸೆಯನ್ನು ಕತ್ತರಿಸಿ , ಟ್ರಿಮ್ ಮಾಡಿ ಎಂದು ನಗರದ ಸೇಲೂನ್‌ಗಳಿಗೆ ಲಗ್ಗೆ ಇಡಲಾರಂಭಿಸಿದ್ದಾರೆ. ಈ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಗಾಗಲೇ 25 ಕ್ಕೂ ಹೆಚ್ಚು ಯುವಕರು ಈ ತರಹ ಮೀಸೆ ಟ್ರಿಮ್ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ, ಈ ಬಗ್ಗೆ ಪ್ರತಿಕ್ರೀಯಿಸಿರುವ ಅಭಿನಂದನ್‌ ಅಭಿಮಾನಿಯೊಬ್ಬ ಅಭಿನಂದನ್ ಈ ದೇಶದ ಗೌರವ. ಶತ್ರುಗಳ ಯುದ್ದವಿಮಾನ ಹೊಡೆದುರುಳಿಸಿ, ಬಳಿಕ ತಾನು ಚಲಾಯಿಸುತ್ತಿದ್ದ ವಿಮಾನ ಶತರುಗಳ ಗುಂಡಿಗೆ ಅವಘಡಕ್ಕೀಡಾಗಿ ಶತ್ರು ರಾಷ್ಟ್ರದಲ್ಲಿ ಬಿದ್ದು ಸರೆಯಾಗಿ ಹಿಂಸೆ ಅನುಭವಿಸಿದರೂ ದೇಶದ ಅಖಂಡತೆಗಾಗಿ ಧೈರ್ಯ್ರದಿಂದ ಸವಾಲುಗಳಣ್ನು ಎದುರಿಸಿ ಸ್ವೇದೇಶಕ್ಕೆ ವಾಪಸ್ಸ್ ಆಗಿದ್ದಾರೆ. ಅಂತಹ ಅಭಿಮಾನದ ಅಭಿನಂದನ್‌ರ ಮೀಸೆ ಇಡುವುದು ಒಂದು ಹೆಮ್ಮಯ ವಿಚಾರ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *