Connect with us

LATEST NEWS

ಕಾಂಗ್ರೇಸ್ ಮನೆ ಮನೆ ಅಭಿಯಾನ – ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭಾಗಿ

ಕಾಂಗ್ರೇಸ್ ಮನೆ ಮನೆ ಅಭಿಯಾನ – ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಭಾಗಿ

ಮಂಗಳೂರು ನವೆಂಬರ್ 6: ಮಂಗಳೂರಿನಲ್ಲಿ ಕಾಂಗ್ರೇಸ್ ನಿಂದ ಮನೆ ಮನೆಗೆ ಅಭಿಯಾನ ಕಾರ್ಯಕ್ರಮದ ಮುಂದುವರಿದ ಭಾಗ ನಡೆಯುತ್ತಿದ್ದು. ಇಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರು ಜಾಥಾದಲ್ಲಿ ಭಾಗಿಯಾಗಿದ್ದಾರೆ.

ಕಾಂಗ್ರೇಸ್ ನ ಮನೆ ಮನೆಗೆ ಅಭಿಯಾನ ಭಾಗವಹಿಸಲು ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಅವರಿಗೆ ಮಂಗಳೂರಿನ ಕಾವೂರು ಜಂಕ್ಷನ್ ಬಳಿ ಕಾಂಗ್ರೇಸ್ ಕಾರ್ಯಕರ್ತರಿಂದ ಸ್ವಾಗತ ಕೊರಲಾಯಿತು. ಕಾವೂರು ಜಂಕ್ಷನ್‌ನಿಂದ ಆಕಾಶಭವನಕ್ಕೆ ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿದರು.

ನಂತರ ಮಂಗಳೂರಿನ ಆಕಾಶ ಭವನ ಪ್ರದೇಶದಲ್ಲಿ ಮನೆ ಮನೆಗೆ ಅಭಿಯಾನವನ್ನು ಆರಂಭಿಸಲಾಯಿತು. ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕ ಮೊಯಿದ್ದೀನ್ ಬಾವಾ ಸಾಥ್ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *