
ಮಂಗಳೂರು. ಜುಲೈ15: ಜುಲೈ 4 ರಂದು ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಕುರಿತ ಸ್ಪೋಟಕ ಮಾಹಿತಿ ತನ್ನ ಬಳಿಯಿದೆ ಎನ್ನುವ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದ ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಇದೀಗ ಬಂಟ್ವಾಳ ಪೋಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ಶರತ್ ಸಾವಿನ ಕುರಿತು ಸ್ವಾಮೀಜಿ ಬಳಿಯಿರುವಂತಹ ಮಾಹಿತಿಯನ್ನು ಪೋಲೀಸರಿಗೆ ನೀಡುವ ಹಿನ್ನಲೆಯಲ್ಲಿ ಜುಲೈ 17 ರ ಸೋಮವಾರ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಹಾಜರಿರುವಂತೆ ನೋಟೀಸ್ ನಲ್ಲಿ ಕೋರಲಾಗಿದೆ.



