ಮುಂಬಯಿಯಲ್ಲಿ ಕೇಸರಿ ಕಲರವ
ಮುಂಬಯಿ ಅಗಸ್ಟ್ 10 : ಸರಕಾರಿ ಉದ್ಯೋಗ ಮತ್ತು ಕಾಲೇಜು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬುಧವಾರ ಮಹಾರಾಷ್ಟ್ರದ ಮರಾಠ ಸಮುದಾಯ ಮುಂಬಯಿಯ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರಾಲಿ ನಡೆಸಿತು. ಇದರಲ್ಲಿ ಕೇಸರಿ ಬಾವುಟ ಹಿಡಿದುಕೊಂಡ ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಇಡೀ ಆಜಾದ್ ಮೈದಾನ ಕೇಸರಿಮಯವಾಗಿತ್ತು. ಮರಾಠ ಸಮುದಾಯದ ಈ ಬಲ ಪ್ರದರ್ಶನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಣಿದಿದ್ದು, ಮುಖ್ಯ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಮರಾಠರಿಗೂ ವಿಸ್ತರಿಸುವುದಾಗಿ ಹಾಗೂ ಭೂಮಿ ನೀಡುವುದಾಗಿಯೂ ಫಡ್ನವೀಸ್ ಆಶ್ವಾಸನೆ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಈ ಪ್ರತಿಭಟನೆ ಯಶಸ್ವಿಯಾಗಿದ್ದು, ಇದು ಈ ವರ್ಷ ಮರಾಠ ಸಮುದಾಯ ನಡೆಸಿದ 58 ನೇ ಪ್ರತಿಭಟನಾ ಸಮಾವೇಶವಾಗಿತ್ತು.
ಪ್ರತಿಭಟನೆ ಶಾಂತಿಯುತವಾಗಿ ನಡೆಯಿತಾದರೂ, ಪ್ರತಿಭಟನೆಯಿಂದ ಇಡೀ ಮುಂಬಯಿ ನಗರದಲ್ಲಿ 9 ಗಂಟೆಗೂ ಮಿಕ್ಕಿ ಟ್ರಾಫಿಕ್ ಜಾಮ್ ಆಗಿತ್ತು.
Facebook Comments
You may like
ಮುಕೇಶ್ ಅಂಬಾನಿ ನಿವಾಸದ ಬಳಿ ಜಿಲೆಟಿನ್ ಸ್ಪೋಟ ಪತ್ತೆ
ಕೇರಳ ಮತ್ತು ಮುಂಬೈಯಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ : ಸಂಸದೆ ಶೋಭಾ
ರಿಪಬ್ಲಿಕ್ ಭಾರತ್ ಚಾನೆಲ್ ನ ನಿರೂಪಕ ಕೊರೊನಾಗೆ ಬಲಿ
ಮುಂಬೈ ಜೀವನಾಡಿ ಲೋಕಲ್ ಟ್ರೈನ್ ಗೆ ಶಿರಬಾಗಿ ನಮಿಸಿದ ಪ್ರಯಾಣಿಕ
ಸಾಮಾಜಿಕ ಜಾಲತಾಣದಲ್ಲಿ ಪರಿಚಯ 13 ವರ್ಷದ ಬಾಲಕಿಯನ್ನು ಮುಂಬೈಗೆ ಕರೆಸಿ ಸಾಮೂಹಿಕ ಅತ್ಯಾಚಾರ
4ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲವು – ಸರಣಿ ಗೆದ್ದ ಭಾರತ
You must be logged in to post a comment Login