MANGALORE
ಮಂಗಳೂರು ಮುಸ್ಲಿಂ ಪೇಜ್ ಮತ್ತೆ ವಿವಾದದಲ್ಲಿ ; ರಕ್ಷ ಬಂಧನವನ್ನು ಗೇಲಿಮಾಡಿದ MMP
ಮಂಗಳೂರು, ಅಗಸ್ಟ್ 12 : ವಿವಾದಿಂದಲೇ ಕುಖ್ಯಾತಿಯಲ್ಲಿರುವ ಮಂಗಳೂರು ಮುಸ್ಲಿಂ ಪೇಜ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಹಿಂದುಗಳ ರಕ್ಷ ಬಂಧನ ಕಾರ್ಯಕ್ರಮವನ್ನು ಗೇಲಿ ಮಾಡುವ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಮತ್ತೆ ಇವರ ಧಾರ್ಮಿಕ ಸೌಹಾರ್ದತೆ ಕೆಡಿಸುವ ಬರಹ ಪೋಸ್ಟ್ ಆಗಿದೆ.
ರಾಖಿ ಕಟ್ಟಿಸಿಕೊಂಡ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ನಿಂದಿಸಲಾಗಿದೆ,ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಗೆ ಹುಡುಗರು ರಕ್ಷಾ ಬಂಧನವನ್ನು ಕಟ್ಟುವ ಪೋಟೋವನ್ನು ಟೀಕಿಸಿರುವ ಮುಸ್ಲಿಂ ಪೇಜ್, ಇಸ್ಲಾಂ ತತ್ವ ಆದರ್ಶಗಳನ್ನು ಗಾಳಿಗೆ ತೂರಿ ಹಿಂದೂ ಯುವಕರ ಮುಂದೆ ಕೈ ಚಾಚಿ ರಾಖಿ ಕಟ್ಟಿಸಿಕೊಳ್ಳುವವರು ಮುಸ್ಲಿಮರೇ ಎಂದು ಟೀಕೆ ಮಾಡಲಾಗಿದೆ, ಅಲ್ಲದೆ ಮುಸ್ಲಿಮ್ ಹುಡುಗಿಯರಿಗೆ ಕಾಲೇಜು ಶಿಕ್ಷಣದ ಅಗತ್ಯ ಏನು ? ಎಂದು ಪ್ರಶ್ನಿಸಿದ್ದಾರೆ. ಇಸ್ಲಾಮಿಕ್ ಶಿಕ್ಷಣ ದ ಅಗತ್ಯ ಇದ್ಯಾ..? ಇವರನ್ನು ಶಾಲೆಗೆ ಕಳುಹಿಸಿ ಅದೇನು ಸಾಧನೆ ಮಾಡಲಿರುವಿರಿ ಎಂದು ಸ್ವತಾ ಮುಸ್ಲೀಂ ವಿದ್ಯಾರ್ಥಿನಿಯರ ಹೆತ್ತವರನ್ನು ಪ್ರಶ್ನೆ ಮಾಡಿದ್ದಾರೆ ಮಂಗಳೂರು ಮುಸ್ಲೀಂ ಪೇಜ್ ನಲ್ಲಿ .ಇವತ್ತು ರಾಖಿ ಕಟ್ಟುವವರು ನಾಳೆ ತಾಳಿ ಕಟ್ಟುವರು ಎಂದು ಮುಸ್ಲಿಂ ವಿದ್ಯಾರ್ಥಿನಿಗಳನ್ನು ಹೀನಾಯವಾಗಿ ನಿಂದಿಸಲಾಗಿದೆ, ಸಾಮಾಜಿಕ ಜಾಲ ತಾಣದಲ್ಲಿ ಮಂಗಳೂರು ಮುಸ್ಲಿಂ ಪೇಜ್ ನ ಈ ಕೀಳು ನಿಂದನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ, ಮುಸ್ಲಿಂ ಧರ್ಮದವರೇ ವಿರೋಧಿಸಿದ್ದು ಮಂಗಳೂರು ಮುಸ್ಲಿಂ ಪೇಜ್ ವಿರುದ್ದ ಕಾನೂನು ಕ್ರಮ ಕೈ ಗೊಳ್ಳಲು ಒತ್ತಾಯಿಸಿದ್ದಾರೆ.
Facebook Comments
You may like
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
ಪೂಜೆಯಲ್ಲಿ ಪಾಲ್ಗೊಂಡಿದ್ದ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ…!
ಧರ್ಮಬೋಧಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಕಾಳಿದೇವಿಯ ಮಂತ್ರ ಪಠಣ ಪ್ರಯೋಜನ.
ಶ್ರೀ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿ ಫಲಾಫಲವನ್ನು ತಿಳಿಯೋಣ.
You must be logged in to post a comment Login