Connect with us

DAKSHINA KANNADA

ಭಾಗವತಿಕೆ ನಿಲ್ಲಿಸಿದ ಕಬಣೂರು ಶ್ರೀಧರ ರಾವ್

ಭಾಗವತಿಕೆ ನಿಲ್ಲಿಸಿದ ಕಬಣೂರು ಶ್ರೀಧರ ರಾವ್ 

ಮಂಗಳೂರು, ಸೆಪ್ಟೆಂಬರ್ 18 :  ಪ್ರಸಿದ್ಧ ಯಕ್ಷಗಾನ ಭಾಗವತ ಕುಬಣೂರು ಶ್ರೀಧರ ರಾವ್ ಅವರು ನಿಧನ ಹೊಂದಿದ್ದಾರೆ. ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶ್ರೀಧರ್ ರಾವ್ ಅವರು ವಿಧಿವಶರಾಗಿದ್ದಾರೆ.

ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತರಾಗಿದ ಶ್ರೀಧರ ರಾವ್ ಅವರು ಅಪಾರ ಅಭಿಮಾನಿ ವರ್ಗದವರನ್ನು ಹೊಂದಿದ್ದರು.

66 ವರ್ಷದ ಶ್ರೀಧರ ರಾವ್ ತೀವ್ರ ಜ್ವರದಿಂದ ಬಳಲುತ್ತಿದ್ದು,ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 25 ವರ್ಷದಿಂದ ಯಕ್ಷ ಪ್ರಭ ಮಾಸ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕರಾಗಿದ್ದರು.

ಕಟೀಲು ಮೇಳದ ಪ್ರಧಾನ ಬಾಗವತರಾಗಿದ್ದ ಶ್ರೀಯುತರು ಕದ್ರಿಮೇಳ, ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿ ಕಳೆದ 25 ವರ್ಷಗಳಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ದಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ ಪ್ರಸಂಗಗಳ ರಚಿಸಿದ ಅವರು ಯಕ್ಷರಂಗದ ಕೀರ್ತಿಶೇಷ ಕಲ್ಲಾಡಿ ವಿಠಲ ಶೆಟ್ಟರ ಜೀವನ ಗಾಥಾ ಯಕ್ಷವಿಜಯ ವಿಠಲ ಕೃತಿನ್ನು ರಚಿಸಿದ್ದರು.

Share Information
Advertisement
Click to comment

You must be logged in to post a comment Login

Leave a Reply