LATEST NEWS
ಉದಯ ನ್ಯೂಸ್ ಮುಚ್ಚುವ ಹಂತಕ್ಕೆ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಬೆಂಗಳೂರು – ಕನ್ನಡದಲ್ಲಿ ದೂರದರ್ಶನದ ನ್ಯೂಸ್ ನಂತರ ನ್ಯೂಸ್ ಬಿತ್ತರಿಸುತ್ತಿದ್ದ ಮೊತ್ತ ಮೊದಲ ಖಾಸಗಿ ನ್ಯೂಸ್ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ.
ಸನ್ ನೆಟ್ ವರ್ಕ್ ಒಡೆತನದ ಉದಯ ನ್ಯೂಸ್ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ. ಚಾನೆಲ್ ನ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ ಕನ್ನಡ ನ್ಯೂಸ್ ಡಿವಿಶನ್ ನಿರಂತರ ನಷ್ಟದಲ್ಲಿದ್ದು ಈ ಹಿನ್ನಲೆಯಲ್ಲಿ ಚಾನೆಲ್ ಮುಚ್ಚುವ ಹಂತಕ್ಕೆ ಬಂದಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಖಾಸಗಿ ಚಾನೆಲ್ ಗಳ ಪೈಪೋಟಿಯ ನಡುವೆ ಉದಯ ನ್ಯೂಸ್ ಚಾನೆಲ್ ಪೈಪೋಟಿ ನೀಡಲು ಸಾಧ್ಯವಾಗದೇ ನಷ್ಟದಲ್ಲಿ ನಡೆಯುತ್ತಿತ್ತು. ಸನ್ ನೆಟ್ ವರ್ಕ್ ಒಡೆತನದ ಈ ಉದಯ ನ್ಯೂಸ್ ಚಾನೆಲ್ ಸುಮಾರು 19 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. ಈ ಚಾನೆಲ್ ನಲ್ಲಿ ಸುಮಾರು 73 ಮಂದಿ ಕೆಲಸ ಮಾಡುತ್ತಿದ್ದು, ಸದ್ಯ ಕೆಲಸ ಕಳೆದುಕೊಳ್ಳುವ ಬೀತಿಯಲ್ಲಿದ್ದಾರೆ.
You must be logged in to post a comment Login