Connect with us

MANGALORE

ನವೆಂಬರ್ 26 ರಂದು ಮಂಗಳೂರಿಗೆ ಶ್ರೀ ಶ್ರೀ ರವಿಶಂಕರ ಗುರೂಜಿ

ನವೆಂಬರ್ 26 ರಂದು ಮಂಗಳೂರಿಗೆ ಶ್ರೀ ಶ್ರೀ ರವಿಶಂಕರ ಗುರೂಜಿ

ನವೆಂಬರ್ 19:ಶ್ರೀಶ್ರೀ ರವಿಶಂಕರ ಗುರೂಜಿ ಅವರು ನವೆಂಬರ್ 26 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ವಿಶ್ವವಿಖ್ಯಾತ ಪೂಜ್ಯ ಶ್ರೀ ಶ್ರೀ ಗುರೂಜಿ ಅವರು “ಸ್ಪಂದನಾ – ಶ್ರೀ ಶ್ರೀ” ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನವೆಂಬರ್ 26ರಂದು ಕೈಗೊಳ್ಳಲಿದ್ದಾರೆ.

ನವೆಂಬರ್ 26ರಂದು ಸಂಜೆ 6.00ಕ್ಕೆ ಮಂಗಳೂರಿನ ಏರ್‌ಪೋರ್ಟ್ ರಸ್ತೆಯ ಯೆಯ್ಯಾಡಿಯಲ್ಲಿರುವ ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದ ಮೈದಾನದಲ್ಲಿ ಈ ಕಾರ‍್ಯಕ್ರಮವನ್ನು ಆಧ್ಯಾತ್ಮ ಗುರು ಶ್ರೀ ಶ್ರೀ ಅವರು ನಡೆಸಿಕೊಡಲಿದ್ದಾರೆ.

ಗಾನ, ಜ್ಞಾನ ಮತ್ತು ಧ್ಯಾನದ ಮೂಲಕ ಎಲ್ಲರ ಮನ, ಮನೆ, ಹೃದಯದಲ್ಲಿ ಸಂತೋಷವನ್ನು ಉಂಟು ಮಾಡುವ “ಸ್ಪಂದನಾ – ಶ್ರೀ ಶ್ರೀ” ಕಾರ್ಯಕ್ರಮ ಇದಾಗಿದೆ. ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ಮಂಗಳೂರಿನ ನಾಗರಿಕರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.

ಭಾಗವಹಿಸಲು ಇಚ್ಚಿಸುವವರು ಕಾರ‍್ಯಕ್ರಮದ ಅರ್ಧ ಗಂಟೆ ಮೊದಲು ಸ್ಥಳಕ್ಕೆ ಆಗಮಿಸಿ, ಕುಳಿತುಕೊಳ್ಳಬೇಕು ಎಂದು ಸಂಘಟಕರು ವಿನಂತಿ ಮಾಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *