BANTWAL
ಬಂಟ್ವಾಳದಲ್ಲಿ ಯುವಕ ಆತ್ಮಹತ್ಯೆ..!
ಬಂಟ್ವಾಳ: ಯುವಕನೋರ್ವ ಮನೆಯ ಹಿಂಬದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡರಾತ್ರಿ ಬಂಟ್ವಾಳ ತಾಲೂಕಿ ಸರಪಾಡಿ ಗ್ರಾಮದ ಪೆರ್ಲ ದರ್ಖಾಸು ಬಳಿ ಬೆಳಕಿಗೆ ಬಂದಿದೆ.
ಪೆರ್ಲ ದರ್ಖಾಸು ನಿವಾಸಿ ಕೃಷ್ಣಪ್ಪ ನಾಯ್ಕ್ ಅವರ ಪುತ್ರ ವಿನೋದ್ ನಾಯ್ಕ್(33) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ವಿನೋದ್ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಅವಿವಾಹಿತನಾಗಿದ್ದ ವಿನೋದ್ ತಂದೆ- ತಾಯಿ, ಅಕ್ಕ ಹಾಗೂ ತಮ್ಮನನ್ನು ಅಗಲಿದ್ದಾನೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತ ಯುವಕನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login