LATEST NEWS
ಕೇರಳ – ಸಿಡಿಲು ಬಡಿದು ಕ್ರಿಕೆಟ್ ಆಡುತ್ತಿದ್ದ 29 ವರ್ಷದ ಯುವಕ ಸಾವು

ಅಲಪ್ಪುಳ ಮಾರ್ಚ್ 17: ಕ್ರಿಕೆಟ್ ಆಟ ಆಡುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ 28 ವರ್ಷ ಪ್ರಾಯದ ಯುವಕನೊಬ್ಬ ಸಾವನಪ್ಪಿದ ಘಟನೆ ಕೇರಳದ ಕರಾವಳಿ ಜಿಲ್ಲೆ ಅಲಪ್ಪುಳದಲ್ಲಿ ನಡೆದಿದೆ. ಮೃತ ಯುವಕನನ್ನು ಅಲಪ್ಪುಳದ ಕೊಡುಪ್ಪುನ್ನ ಮೂಲದ ಅಖಿಲ್ ಪಿ ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವನ್ನಪ್ಪಿದ್ದಾನೆ ಎಂದು ಅವರು ಹೇಳಿದ್ದಾರೆ. ಸಿಡಿಲು ಬಡಿದ ನಂತರ ಅಖಿಲ್ ಅವರನ್ನು ತಕ್ಷಣ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
