LATEST NEWS
ಕಾಪು ಕಡಲ ಕಿನಾರೆಯಲ್ಲಿ ಸಮುದ್ರ ಪಾಲಾದ ಬೆಂಗಳೂರು ಯುವಕ
ಕಾಪು ಕಡಲ ಕಿನಾರೆಯಲ್ಲಿ ಸಮುದ್ರ ಪಾಲಾದ ಬೆಂಗಳೂರು ಯುವಕ
ಉಡುಪಿ ಎಪ್ರಿಲ್ 28: ಪ್ರವಾಸಕ್ಕೆಂದು ಆಗಮಿಸಿದ್ದ ಏಳು ಮಂದಿಯಲ್ಲಿ ಓರ್ವ ನೀರುಪಾಲಾದರೆ ಇನ್ನೋರ್ವನನ್ನು ರಕ್ಷಿಸಿದ ಘಟನೆ ಕಾಪು ಕಡಲಕಿನಾರೆಯಲ್ಲಿ ನಡೆದಿದೆ.
ಬೆಂಗಳೂರು ನಿವಾಸಿ 17 ವರ್ಷದ ಕಿಶೋರ್ ನೀರುಪಾಲಾದ ಯುವಕ. ಬೆಂಗಳೂರಿನಿಂದ ಏಳುಮಂದಿಯ ತಂಡವೊಂದು ಕಾಪು ಕಡಲಕಿನಾರೆಗೆ ಆಗಮಿಸಿತ್ತು.
ಈ ವೇಳೆ ಕಿಶೋರ್ ಹಾಗೂ ಭರತ್ ನೀರಲ್ಲಿ ಆಟವಾಡಲು ತೆರಳಿದಾಗ ನೀರಿನ ಸೆಳೆತಕ್ಕೆ ಇಬ್ಬರೂ ನೀರುಪಾಲಾಗಿದ್ದಾರೆ. ಸ್ಥಳೀಯರು ಭರತ್ ನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೆ ಕಿಶೋರ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಕಾಪು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
You must be logged in to post a comment Login