Connect with us

DAKSHINA KANNADA

ಅಡಿಕೆ ಕೊಯ್ಯುವ ಸಂದರ್ಭ ವಿದ್ಯುತ್ ತಗುಲಿ ಯುವಕ ಸಾವು

ಪುತ್ತೂರು ಡಿಸೆಂಬರ್ 25 : ಅಲುಮಿನಿಯಂ ಕೊಕ್ಕೆಯ ಸಹಾಯದಿಂದ ಅಡಿಕೆ ಮರದಿಂದ ಅಡಿಕೆ ಕೊಯ್ಯುವಾಗ ಅದು ವಿದ್ಯುತ್ ತಂತಿಗೆ ತಗುಲಿ ನವ ವಿವಾಹಿತರೊಬ್ಬರು ಮೃತ ಪಟ್ಟ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಡೆದಿದೆ.

ಮೃತರನ್ನು ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿಯವರ ಪುತ್ರ ರವೀಂದ್ರ ಪೂಜಾರಿ (36) ಎಂದು ಗುರುತಿಸಲಾಗಿದ್ದು, ಇವರು ಮಂಗಳೂರಿನಲ್ಲಿ ಕಂಪ್ಯೂಟರ್ ಹಾರ್ಡವೇರ್ ಸಂಬಂಧಪಟ್ಟ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.


ಕ್ರಿಸ್ ಮಸ್ ರಜೆಯ ನಿಮಿತ್ತ ಮನೆಗೆ ಬಂದಿದ್ದ ಇವರು ತಮ್ಮ ಮನೆ ಸುತ್ತ ಇದ್ದ ಅಡಿಕೆ ಮರದಲ್ಲಿನ ಅಡಿಕೆ ತೆಗೆಯಲು ಅಲುಮಿನಿಯಂ ಕೊಕ್ಕೆಯನ್ನು ಬಳಸಿದ್ದರು. ಆದರೆ ಅಡಿಕೆ ತೆಗೆಯುತ್ತಿದ್ದಾಗ ಕೊಕ್ಕೆಯೂ ಮೇಲೆ ಹಾದು ಹೋಗುತ್ತಿದ್ದ ಎಚ್ ಟಿ ವಿದ್ಯುತ್ ತಂತಿಗೆ ತಗುಲಿದ್ದು ಇದರ ಮೂಲಕ ರವಿಂದ್ರರವರಿಗೆ ವಿದ್ಯುತ್ ತಗಲಿದೆ ಕರೆಂಟ್ ಶಾಕ್ ಗೆ ರವಿಂದ್ರ ಅವರು ಸ್ಥಳದಲ್ಲೆ ಸಾವನಪ್ಪಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *