Connect with us

DAKSHINA KANNADA

ಕಡಬ – ಸಂಪೂರ್ಣ ಕೆಟ್ಟು ಹೋದ ರಸ್ತೆ – ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು…!!

ಕಡಬ ಎಪ್ರಿಲ್ 18: ನಡೆದಾಡಲು ಸಹ ಆಗದ ಸ್ಥಿತಿಗೆ ತಲುಪಿರುವ ರಸ್ತೆ ಸರಿಪಡಿಸಲು ಆಗ್ರಹಿಸಿ ಕಂದ್ಗಾಜೆ, ನಗ್ರಿ ,ಶರವೂರಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.


ಕಡಬ ತಾಲೂಕು ಅಲಂಕಾರು ಗ್ರಾಮ &ಗ್ರಾಮ ಪಂಚಾಯತ್ ಬುಡರಿಯ ಕ್ರಾಸ್ ನಿಂದ ಶರವೂರು, ನಗ್ರಿ, ಕಕ್ಕೇವೆ ರೋಡ್ ಡಮಾರು ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಸುಮಾರು 30ವರ್ಷ ದಾಮರು ಕಾಣದೆ ಹೋಗಿದೆ. ಈ ಪರಿಸರದಲ್ಲಿ ಸುಮಾರು 250ಕ್ಕೂ ಹೆಚ್ಚು ಮನೆ , ಪೋಸ್ಟ್ ಆಫೀಸ್, 2 ಅಂಗನವಾಡಿ ಕೇಂದ್ರ 2 sc/st ಕಾಲೋನಿ 1 ಸರಕಾರಿ ಶಾಲೆ ಇದೆ. ಅಲ್ಲದೆ ಇಲ್ಲಿನ ಜನರು ತಮ್ಮ ಮೂಲಭೂತ ಅವಶ್ಯಕತೆಗಳಿಗೆ ಅಲಂಕಾರು ಪೇಟೆಯನ್ನು ಅವಲಂಭಿಸಿದ್ದಾರೆ.

ಆದರೆ ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಡೆದಾಡಲು ಸಹ ಕಷ್ಟ ಪಡಬೇಕಾದ ಪರಿಸ್ಥಿತಿಯಲ್ಲಿ ಇದೆ. ಗ್ರಾಮಸ್ಥರು ರಸ್ತೆ ದುರಸ್ಥಿ ಮಾಡಲು ಕಳೆದ 30 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ , ಈ ಹಿನ್ನಲೆ ಸದ್ಯದಲ್ಲೇ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದು, ರಸ್ತೆ ದುರಸ್ಥಿ ಮಾಡದೇ ಯಾವುದೇ ಕಾರಣಕ್ಕೂ ಮತದಾನ ಮಾಡವುದಿಲ್ಲ ಎಂದು ನಿರ್ಧರಿಸಿದ್ದಾರೆ. ಸರಕಾರ ಎಚ್ಚೆತ್ತು ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *